ಬೀದರ.13.ಫೆಬ್ರುವರಿ.25: ದಿನನಿತ್ಯ ಪಠ್ಯವನ್ನು ಪುನರ್ ಪಠಿಸಿಕೊಂಡು ಹೆಚ್ಚಿನ ಪರಿಶ್ರಮ ಹಾಕಿ ಶಾಲೆಗೆ ಹಾಗೂ ಜಿಲ್ಲೆಗೆ ಉತ್ತಮ ಫಲಿತಾಂಶ ತರಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಿನ್ನೆ ಅವರು ಜನವಾಡದ ಸರಕಾರಿ ಪ್ರೌಢ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಅಭ್ಯಾಸ ಕ್ರಮದ ಬಗ್ಗೆ ಸಂವಾದ ನಡೆಸಿದರು.
ಶ್ರದ್ಧೆ ಹಾಗೂ ಪ್ರಮಾಣಿಕತೆಯಿಂದ ಗುರುಗಳ ಮಾರ್ಗದರ್ಶನದಲ್ಲಿ ಪ್ರತಿನಿತ್ಯ ಪಠ್ಯಕ್ರಮವನ್ನು ಪುನರ್ ಮನನ ಮಾಡಿಕೊಂಡು ಪರೀಕ್ಷೆ ಬರೆಯಲು ಸಿದ್ಧಗೊಳ್ಳುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಭಾರತ ದೇಶದ ಭೌಗೋಳಿಕತೆ ಬಗ್ಗೆ ಪಾಠ ಮಾಡಿದರು.