09 ಡಿಸೆಂಬರ್ 24 ರಾಂಚಿ:-ಜಾರ್ಖಂಡ್ ವಿಧಾನಸಭೆಯ ನಾಲ್ಕು ದಿನಗಳ ವಿಶೇಷ ಅಧಿವೇಶನವು ರಾಂಚಿಯಲ್ಲಿ ಹೊಸದಾಗಿ ಚುನಾಯಿತ ಸದಸ್ಯರನ್ನು ಸದನಕ್ಕೆ ಸ್ವಾಗತಿಸುವುದರೊಂದಿಗೆ ಪ್ರಾರಂಭವಾಯಿತು.
ಹೊಸದಾಗಿ ಆಯ್ಕೆಯಾದ ಶಾಸಕರು ಪ್ರಮಾಣ ವಚನ ಸ್ವೀಕರಿಸಲು ಮತ್ತು ಸ್ಪೀಕರ್ ಆಯ್ಕೆ ಮಾಡಲು ಈ ಅಧಿವೇಶನವನ್ನು ಕರೆಯಲಾಗಿದೆ.
ಹಂಗಾಮಿ ಸ್ಪೀಕರ್ ಸ್ಟೀಫನ್ ಮರಾಂಡಿ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುತ್ತಿದ್ದಾರೆ. ಇದು ನಾಳೆಯವರೆಗೆ ಮುಂದುವರಿಯಲಿದೆ.
ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸ್ಪೀಕರ್ ಆಯ್ಕೆ ನಡೆಯಲಿದ್ದು, ನಂತರ ಹೇಮಂತ್ ಸೊರೇನ್ ಸರ್ಕಾರದ ಪರ ವಿಶ್ವಾಸ ಮತಯಾಚನೆ ನಡೆಯಲಿದೆ.
ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು ಬುಧವಾರ ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ನಂತರ ಪ್ರಸಕ್ತ ಹಣಕಾಸು ವರ್ಷದ ಎರಡನೇ ಪೂರಕ ಬಜೆಟ್ ಅನ್ನು ಸದನದಲ್ಲಿ ಮಂಡಿಸಲಾಗುವುದು.