15/06/2025 12:30 PM

Translate Language

Home » ಲೈವ್ ನ್ಯೂಸ್ » ಸಂಸದ ಸಾಗರ್ ಖಂಡ್ರೆಯ ಬೆಂಗಳೂರು ನಿವಾಸದಲ್ಲಿ‌ ಕರೆಂಟ್ ಕಟ್ ಮಾಡಿದವರ ಮೇಲೆ ಕಾನೂನ ಕ್ರಮ

ಸಂಸದ ಸಾಗರ್ ಖಂಡ್ರೆಯ ಬೆಂಗಳೂರು ನಿವಾಸದಲ್ಲಿ‌ ಕರೆಂಟ್ ಕಟ್ ಮಾಡಿದವರ ಮೇಲೆ ಕಾನೂನ ಕ್ರಮ

Facebook
X
WhatsApp
Telegram

ಬೆಂಗಳೂರು.06.ಏಪ್ರಿಲ್.25:- ಬೀದರ್ ಲೋಕಸಭಾ  ಸಂಸದರಾದ ಶ್ರೀ ಸಾಗರ್ ಖಂಡ್ರೆ ಅವರ ಬೆಂಗಳೂರಿನ ನಿವಾಸ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಕೃಷ್ಣ ಅಪಾರ್ಟಮೆಂಟ್‌ನ ಮ್ಯಾನೇಜರ್ ಚಂದ್ರಕುಮಾರ್ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ‌ ಆಗ್ರಹಿಸಲಾಗಿದೆ. ‌ ಸಂಸದ ಸಾಗರ್ ಖಂಡ್ರೆ ಅವರ ಮನೆಯ ನವೀಕರಣ ವೇಳೆಯಲ್ಲಿ ಈ ಘಟನೆ ನಡೆದಿದೆ.

ಕೃಷ್ಣ ಅಪಾರ್ಟ್ ಮೆಂಟ್‌ನ ಮ್ಯಾನೇಜರ್ ಚಂದ್ರಕುಮಾರ್ ಅವರು ಯಾವುದೋ ಸಣ್ಣ ವಿಚಾರಕ್ಕೆ ಅಲ್ಲಿನ ಕಟ್ಟಡ ಕಾರ್ಮಿಕರನ್ನು ಅಡ್ಡಹಾಕಿ ಮನಸ್ಸೋ ‌ಇಚ್ಚೆಯಂತೆ ಬೈದಿದ್ದಾರೆ.

ಈ ಬಗ್ಗೆ ಮನೆಯ ಮಾಲೀಕರಾದ ಸಾಗರ್ ಖಂಡ್ರೆ ಅಥವಾ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡದೇ ಏಕಾಏಕಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

ಈ ವಿಚಾರವಾಗಿ ಮ್ಯಾನೇಜರ್ ಅವರು ಸಚಿವರ ಆಪ್ತ ಸಹಾಯಕ ಬಳಿ ದೂರವಾಣಿ ಮೂಲಕ ವಿಚಾರಿಸಿದಾಗ ಕೃಷ್ಣ ಅಪಾರ್ಟ್ ಮೆಂಟ್ ಸೆಕ್ರಟರಿ ಆದೇಶದಂತೆ ವಿದ್ಯುತ್ ಸ್ಥಗಿತ ಮಾಡಲಾಗಿದೆ ಎಂದು ಹೇಳಿ ತಕ್ಷಣ ಪೋನ್ ಸ್ವಿಚ್ ಆಫ್ ಮಾಡಿದ್ದಾರೆ.‌ ಹೀಗಾಗಿ ಅನವಶ್ಯಕವಾಗಿ ತಕರಾರು ತೆಗೆದು ತೊಂದರೆ ನೀಡುತ್ತಿರುವ ಕೃಷ್ಣ ಅಪಾರ್ಟ್‌ ಮೆಂಟ್ ಮ್ಯಾನೇಜರ್ ಹಾಗೇ ವಿದ್ಯುತ್ ಸ್ಥಗಿತ ಮಾಡಲು ಹೇಳಿದವರ ವಿರುದ್ದ ಕಾನೂನು ಕ್ರಮ ತೆಗದುಕೊಳ್ಳುವಂತೆ ದೂರಿನಲ್ಲಿ ಹೇಳಲಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!