09/06/2025 1:58 AM

Translate Language

Home » ಲೈವ್ ನ್ಯೂಸ್ » “ವಚನದರ್ಶನ” ಮಿಥ್ಯ Vs ಸತ್ಯ ಪುಸ್ತಕ ಬಿಡುಗಡೆ.!

“ವಚನದರ್ಶನ” ಮಿಥ್ಯ Vs ಸತ್ಯ ಪುಸ್ತಕ ಬಿಡುಗಡೆ.!

Facebook
X
WhatsApp
Telegram

ಬೆಂಗಳೂರು.01.ಮಾರ್ಚ್.25:- ಇಂದು ಬೆಂಗಳೂರಿನ ಬಸವ ಸಮಿತಿಯ ಸಭಾಂಗಣದಲ್ಲಿ “ವಚನದರ್ಶನ” ಮಿಥ್ಯ Vs ಸತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಒಂದು ಐತಿಹಾಸಿಕ ಹಾಗು ಹೊಸದೊಂದು ಬೆಳವಣಿಗೆಗೆ ನಾಂದಿ ಹಾಡಿತು.

ಪ್ರಪ್ರಥಮ ಬಾರಿಗೆ ಜಾಗತಿಕ ಲಿಂಗಾಯತ ಮಹಾಸಭಾ ಹಾಗು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಸ್ಥೆಗಳು ಒಂದೆ ವೇದಿಕೆಯಲ್ಲಿ ಸಮಾವೇಶಗೊಂಡವು.ಎರಡು ಸಂಸ್ಥೆಗಳು ಸಮುದಾಯದ ಹಿತಕ್ಕಾಗಿ ಸಮರಸದ ವಿಚಾರಗಳನ್ನು ವ್ಯಕ್ತಪಡಿಸಿದವು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷರಾದ ಶರಣ ಶಂಕರ ಬಿದರಿಯವರ ಮಾತುಗಳು ಹೃದಯಕ್ಕೆ ನಾಟಿದವು.ನನ್ನ ಕಣ್ಣಂಚಿನಿಂದ ಸಂತೋಷದ ನೀರು ನನಗೆ ಗೊತ್ತಿಲ್ಲದೆ ಹರಿದವು.ನಾಡಿನ ಎಲ್ಲ ಪ್ರಮುಖ ಪೂಜ್ಯರು ಉಪಸ್ಥಿತರಿದ್ದು ಸಕಾರಾತ್ಮಕ ಮಾತುಗಳನ್ನಾಡಿ ಒಗ್ಗಟ್ಟಿನಿಂದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆಯೋಣ ಎಂಬ ವಿಚಾರ ಹಂಚಿಕೊಂಡರು.

“ವಚನದರ್ಶನ” ಮಿಥ್ಯ Vs ಸತ್ಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶ್ರೀ ಎಂ.ಬಿ.ಪಾಟೀಲರು ಲಿಂಗಾಯತರು ಸರ್ವಧರ್ಮಗಳನ್ನು ಗೌರವಿಸುವರಾಗಿದ್ದೇವೆ ಆದರೆ ನಮ್ಮ ಅಸ್ಮಿತೆಗೆ ಯಾರಾದರು ಧಕ್ಕೆ ತಂದರೆ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.ಸನ್ಮಾನ್ಯ ಬಸವರಾಜ ಹೊರಟ್ಟಿ ,ಆಳಂದ ಶಾಸಕ ಶ್ರೀ ಬಿ.ಆರ್.ಪಾಟೀಲರು ಹಾಗು ವಿದ್ವಾಂಸರಾದ ಗೊ.ರು.ಚ ರವರು ತಮ್ಮ ವಿಚಾರ ಹಂಚಿಕೊಂಡರು.

ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಜನರು ಭಾಗವಹಿಸಿ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಒಟ್ಟಾರೆ ಇದೊಂದು ಅವಿಸ್ಮರಣೀಯ ಹಾಗು ಅಭೂತಪೂರ್ವ ಕಾರ್ಯಕ್ರಮವಾಗಿತ್ತು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!