09/06/2025 7:47 PM

Translate Language

Home » ಬೀದರ » ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರರಿಗೆ ಸನ್ಮಾನ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರರಿಗೆ ಸನ್ಮಾನ

Facebook
X
WhatsApp
Telegram



ಬೀದರ.13.ಫೆ.25:-ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಯಾಧ್ಯಕ್ಷರಾದ ಶ್ರೀ ಸೋಮಶೇಖರ ಬಿರಾದಾರ ಅವರನ್ನು ಪ್ರತಾಪನಗರದ ಸಮುದಾಯ ಭವನದಲ್ಲಿ ದಿ. ೧೧-೨-೨೦೨೫ ರಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ ಅರೆಕಾಲಿಕ ಉಪನ್ಯಾಸಕರ ಸಂಘ, ಜಿಲ್ಲಾ ಶಾಖೆ, ಬೀದರ ವತಿಯಿಂದ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಲಾಯಿತು.


ಸನ್ಮಾನ ಮಾಡಿ ಮಾತನಾಡಿದ ಸಂಘದ ರಾಜ್ಯಧ್ಯಕ್ಷರಾದ ಪ್ರವೀಣಕುಮಾರ ಮೀರಾಗಂಜಕರ ಮಾತನಾಡಿ, ಸೋಮಶೇಖರ ಬಿರಾದಾರ ಅವರು ಅಧ್ಯಕ್ಷರಾಗಿದ್ದಕ್ಕೆ ತುಂಬ ಹರ್ಷ ವ್ಯಕ್ತಪಡಿಸಿದರು. ಇಡೀ ಜಿಲ್ಲಾ ಸರ್ಕಾರಿ ನೌಕರರ ಸಮುದಾಯದ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ಔದಾರ್ಯದ ಗುಣ ಇವರು ಹೊಂದಿದ್ದಾರೆ ಮುಂದೆ ಎಲ್ಲ ರೀತಿಯಿಂದ ಸರ್ಕಾರಿ ನೌಕರರಿಗೆ ಉತ್ತಮ ರೀತಿಯ ಸಕಲ ಸೌಲಭ್ಯಗಳು ದೊರಕಲಿವೆ ಎಂದರು.


ಬಿರಾದಾರ ಅವರು ಉತ್ತಮ ರೀತಿಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆಂಬ ಭರವಸೆಯನ್ನು ಜಿಲ್ಲೆಯ ಸರ್ಕಾರಿ ನೌಕರರು ಹೊಂದಿದ್ದಾರೆ ಅವರ ಆಶಯದಂತೆ ಬಿರಾದಾರ ಅವರು ಅತಿ ಸೌಜನ್ಯಯುತವಾಗಿ ತಮ್ಮ ಕಾರ್ಯವೈಖರಿ ಮುಂದುವರೆಸಿಕೊAಡು ಉತ್ತಮ ಕೀರ್ತಿ ತರಲೆಂದು ಈ ಸಂದರ್ಭದಲ್ಲಿ ಶುಭ ಕೋರುವೆ ಎಂದು ಹರ್ಷ ವ್ಯಕ್ತಪಡಿಸಿದರು.


ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಆಟೊ ವಿಭಾಗದ ವಿಭಾಗಾಧಿಕಾರಿ ಶ್ರೀಕಾಂತ ಕಮಠಾಣೆ, ಯಾಂತ್ರಿಕ ವಿಭಾಗದ ಹಿರಿಯ ಶ್ರೇಣಿ ಉಪನ್ಯಾಕರಾದ ಅಮಿರ ಪಟೇಲ, ಎಂ.ಡಿ. ವಾಜೀದ, ಹಾಗೂ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಕಾಂತ ವಿಶ್ವಕರ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ದೇಸಾಯಿ, ಜಂಟಿ ಕಾರ್ಯದರ್ಶಿ ಶರಣಬಸಪ್ಪ ವಾಲಿ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!