ಬೀದರ.25.ಜೂನ್.25:- 110/33-11ಕೆವಿ ಉಪ ವಿತರಣಾ ಕೇಂದ್ರ, ಕವಿಪ್ರನಿನಿ ಮಂಠಾಳ ಮತ್ತು ಸಸ್ತಾಪೂರ (ಬಸವಕಲ್ಯಾಣ ಕಾರ್ಯ ಮತ್ತು ಪಾಲನೆ ಉಪ ವಿಭಾಗ) ವ್ಯಾಪ್ತಿಯಲ್ಲಿ ಬರುವ 110ಕೆವಿ ಮಂಠಾಳ ಮತ್ತು ಸಸ್ತಾಪೂರ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತು ಕೆಲಸದ ನಿಮಿತ್ಯ ದಿನಾಂಕ: 28-06-2025 ರಂದು ಬೆಳಿಗ್ಗೆ 8 ರಿಂದ 2 ಗಂಟೆಯವರೆಗೆ 33ಕೆವಿ ಬಸವಕಲ್ಯಾಣ, 33ಕೆವಿ ಮುಚಲಂಬ, 33ಕೆವಿ ಮುಡಬಿ, 33ಕೆಬಿ ಭೋಸ್ಗಾ, ಮೋರಖಂಡಿ ಮತ್ತು ಸುತ್ತಲಿನ ಗ್ರಾಮಾಂತರ ಪ್ರದೇಶಗಳಾದ 11ಕೆವಿ ನಾರಾಯಣಪುರ, 11ಕೆವಿ ಪರ್ತಾಪುರ, 11ಕೆವಿ ಸಸ್ತಾಪುರ, 11ಕೆವಿ ಸೀತಾ ಕಾಲೋನಿ, 11ಕೆವಿ ತ್ರಿಪೂರಾಂತ್, 11ಕೆವಿ ಚುಲ್ಕಿನಾಳ, 11ಕೆವಿ ಖಾಂಡಸರಿ, 11ಕೆವಿ ಕೈಗಾರಿಕಾ ಪ್ರದೇಶದಲ್ಲಿ 11ಕೆವಿ ಮಂಠಾಳ, ನಿಲಕಂಠವಾಡಿ, ಜಾಫರವಾಡಿ, ಗುಂಡೂರ, ಚಿಟ್ಟಾ (ಕೆ), ಖಾನಾಪೂರ ಉಜಲಂಬ ಮತ್ತು ಫೋಟಾಳ ಮಾರ್ಗದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಹುಮನಾಬಾದ 220ಕೆವಿ ಸ್ವೀಕರಣಾ ಕೇಂದ್ರದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
