ಬೆಂಗಳೂರು. 16. ಜೂನ್.26:ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ಸಂಘಟನೆ ನೋಂದಣಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಲ್ಲದೆ ಆರ್ಥಿಕ ಚಟುವಟಿಕೆ ಬಗ್ಗೆ ಮಾಹಿತಿ ಕೊಡಬೇಕು ಎಂದು ಸಂಘಟನೆಯ ಮುಖ್ಯಸ್ಥರಿಗೆ ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ನೊಂದಾಯಿತವಲ್ಲದ ಅನೇಕ ಸಂಘಟನೆಗಳಿವೆ.
ನೋಂದಣಿ ಮಾಡಿಕೊಳ್ಳದೇ ಇದ್ದರೆ ಏನಾಗುತ್ತದೆ, ನೋಂದಣಿಯಾಗದ ಸಂಸ್ಥೆಗಳು ಯಾವುವು ಇಲ್ಲಿದೆ ವಿವರ.
ಕರ್ನಾಟಕದಲ್ಲಿ ಆರ್ಎಸ್ಎಸ್ (RSS) ಸಂಸ್ಥೆಯಂತೆಯೇ ಯಾವುದೇ ನಿರ್ದಿಷ್ಟ ಅಧಿಕೃತ ನೋಂದಣಿ (ಸೊಸೈಟಿ, ಟ್ರಸ್ಟ್ ಅಥವಾ ಕಂಪನಿ ಕಾಯ್ದೆಯಡಿ ನೋಂದಾಯಿಸಿಕೊಳ್ಳದೆ) ಇಲ್ಲದೆ, ಅತ್ಯಂತ ಜನಪ್ರಿಯವಾಗಿ ಮತ್ತು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಲವು ಪ್ರಮುಖ ಸಂಘಟನೆಗಳು, ಜನಪರ ಚಳವಳಿಗಳು ಮತ್ತು ನಾಗರಿಕ ಒಕ್ಕೂಟಗಳಿವೆ. ಕೆಲವು ದಲಿತ ಸಂಘರ್ಷ ಬಣಗಳು, ರೈತ ಸಂಘಗಳು, ಕನ್ನಡ ಪರ ಒಕ್ಕೂಟಗಳು ಕೆಲವು ಇಂದಿಗೂ ನೋಂದಣಿಯಾಗದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಗುಂಪುಗಳು ಯಾವುದೇ ಕಾನೂನುಬದ್ಧ ಆಡಳಿತಾತ್ಮಕ ನಿಯಂತ್ರಣಕ್ಕೆ ಸಿಲುಕದೆ, ಮುಕ್ತವಾಗಿ ಆಯಾ ಸನ್ನಿವೇಶಕ್ಕೆ ತಕ್ಕಂತೆ ತಳಮಟ್ಟದ ಸ್ವಯಂಸೇವಕರ ಮೂಲಕ ಹೋರಾಟ ರೂಪಿಸಲು ಹಾಗೂ ಸರ್ಕಾರದ ಹಸ್ತಕ್ಷೇಪವನ್ನು ತಡೆಯಲು ಉದ್ದೇಶಪೂರ್ವಕವಾಗಿಯೇ ನೋಂದಣಿ ರಹಿತವಾಗಿ ಕಾರ್ಯನಿರ್ವಹಿಸುತ್ತವೆ.
ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರ ಅಡಿಯಲ್ಲಿ ನೋಂದಾಯಿಸಿಕೊಂಡರೆ ಪ್ರತಿ ವರ್ಷ ಆಡಿಟ್ ವರದಿ ನೀಡುವುದು, ಚುನಾವಣೆ ನಡೆಸುವುದು ಮತ್ತು ಸರ್ಕಾರದ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗುತ್ತದೆ.
ಬೃಹತ್ ಸಾರ್ವಜನಿಕ ಚಳವಳಿಗಳು ತಮಗೆ ಮುಕ್ತ ಸ್ವಾತಂತ್ರ್ಯ ಇರಲಿ ಎಂಬ ಕಾರಣಕ್ಕೆ ನೋಂದಣಿ ಮಾಡಿಕೊಳ್ಳುವುದಿಲ್ಲ. ಇದರಿಂದಾಗಿ ಪ್ರತಿಭಟನೆಗಳ ಸಮಯದಲ್ಲಿ ಸರ್ಕಾರ ಇವರ ಆಸ್ತಿ ಅಥವಾ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ಕಾನೂನುಬದ್ಧವಾಗಿ ಸಂಘಟನೆಯನ್ನು ರದ್ದುಗೊಳಿಸುವ ಅಪಾಯ ತಪ್ಪುತ್ತದೆ.
ಸೋರ್ಸ್: ವೆಬ್ದುನಿಯಾ






Any questions related to ನೋಂದಣಿಯಾಗದೇ ಇರುವುದು ಆರ್ ಎಸ್ಎಸ್ ಮಾತ್ರವಲ್ಲ ನೋಂದಣಿಯಾಗದಿದ್ದರೆ ಏನಾಗುತ್ತದೆ ಇಲ್ಲಿದೆ ವಿವರ?