ಬೀದರ.09.ಏಪ್ರಿಲ್.25:- ಬೀದರ ಜಿಲ್ಲೆಯ ಭಾಲ್ಕಿ, ಕಮಲನಗರ ಹಾಗೂ ಔರಾದ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕಾರಂಜಾ ಜಲಾಶಯದಿಂದ 0.40 ಟಿ.ಎಂ.ಸಿ. ಪ್ರಮಾಣ ನೀರನ್ನು ಹಾಲಹಳ್ಳಿ ಬ್ಯಾರೇಜಿಗೆ ಅವಶ್ಯಕತೆಗನುಗುಣವಾಗಿ ಹಂತ ಹಂತವಾಗಿ ಹರಿಸಲಾಗುತ್ತಿರುವುದರಿಂದ ನದಿಯ ಅಕ್ಕಪಕ್ಕದ ಸಾರ್ವಜನಿಕರು ನದಿಗೆ ಇಳಿಯುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಈಜುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದೆಂದು ಬೀದರ ಕನೀನಿನಿ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
