09/06/2025 10:29 AM

Translate Language

Home » ಲೈವ್ ನ್ಯೂಸ್ » UGC ಹೊಸ ನಿಯಮಾವಳಿ 2025, ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಭೆ

UGC ಹೊಸ ನಿಯಮಾವಳಿ 2025, ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಭೆ

Facebook
X
WhatsApp
Telegram

ಬೆಂಗಳೂರು: 24.ಜನೆವರಿ.25:- ಕೇಂದ್ರಸರಕಾರ ಯುಜಿಸಿ ಹೊಸ ನಿಯಮಾವಳಿಗೆಸಂಬಂದಿಸಿದ ಎಲ್ಲಾರಾಜ್ಯಸರ್ಕಾರಗಳು ಸಮವೇಶ್ ಮಾಡುತ್ತಿದ್ದಾರೆ.

‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂದು ದಿಲ್ಲಿ ಪರೇಡ್‌ ನಡೆಸಿ, ಕಾಂಗ್ರೆಸ್‌ ಮತ್ತು ಐಎನ್‌ಡಿಐಎ ಒಕ್ಕೂಟದ ಪಕ್ಷಗಳ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರ ಸಭೆ ಆಯೋಜನೆಯಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯ ಕಾಂಗ್ರೆಸ್‌ ಸರಕಾರವು ಈಗ ವಿಶ್ವವಿದ್ಯಾನಿಲಯಗಳ ಕುಲಪತಿ ನೇಮಕಾತಿಯಲ್ಲಿ ವಿಷಯ ದಲ್ಲಿ ಕೇಂದ್ರ ಸರಕಾರದ ವಿರುದ್ಧ ಮತ್ತೂಂದು ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ.

ಯುಜಿಸಿ ನಿಯಮ ತಿದ್ದುಪಡಿಯ ವಿರುದ್ಧ ವಿವಿಧ ರಾಜ್ಯಗಳ ಶಿಕ್ಷಣ ಸಚಿವರನ್ನು ಸಂಘಟಿಸಿ, ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದೆ. ಈ ಸಂಬಂಧ ಫೆ. 5ರಂದು ಬೆಂಗಳೂರಿನಲ್ಲಿ ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಮಾವೇಶ ಆಯೋಜಿಸಿದ್ದು, ಗುರುವಾರ ಹೊಸದಿಲ್ಲಿಯಲ್ಲಿ ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ವಿವರಣೆ ನೀಡಿದ್ದಾರೆ.

ಸಮಾವೇಶದಲ್ಲಿ ಯುಜಿಸಿ ನಿಯಮದಲ್ಲಿರುವ ಶಿಕ್ಷಕರ ನೇಮಕಾತಿ ಮತ್ತು ಉತ್ತೇಜನಕ್ಕೆ ಕನಿಷ್ಠ ಅರ್ಹತೆಗಳು, ಶೈಕ್ಷಣಿಕ ಗುಣಮಟ್ಟ ಮತ್ತು ಕರಡು ಬಗ್ಗೆ ಚರ್ಚಿಸಲು ಭಾಗವಹಿಸಲು ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಚಿವರನ್ನು ಆಹ್ವಾನಿಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟನೆ ಕೊಟ್ಟಿದ್ದಾರೆ.

ಅಧಿಕಾರ ಮೊಟಕು
ಯುಜಿಸಿ ಕರಡು ನಿಯಮಾವಳಿ ರಾಜ್ಯಗಳು ನ್ಯಾಯಸಮ್ಮತವಾಗಿ ಹೊಂದಿದ್ದ ಅಧಿಕಾರವನ್ನು ತೀವ್ರ ವಾಗಿ ಮೊಟಕುಗೊಳಿಸುತ್ತದೆ. ಹಲವು ರಾಜ್ಯ ಗಳು ಈಗಾಗಲೇ ಈ ನಿಯಮಗಳ ವಿರುದ್ಧ ವಿರೋಧ ವ್ಯಕ್ತಪಡಿಸಿವೆ. ಕರಡು ನಿಯಮಾವಳಿಗಳ ಸಾಧಕ-ಬಾಧಕ ಚರ್ಚಿಸಲು ಮತ್ತು ಸಾಮಾನ್ಯ ನಿಲುವು ತೆಗೆದುಕೊಳ್ಳಲು ಈ ಸಮಾವೇಶವನ್ನು ಕರೆಯಲಾಗುತ್ತಿದೆ ಎಂದಿದ್ದಾರೆ.

ಒತ್ತಡ ಸೃಷ್ಟಿಸಲು ಸಮಾವೇಶ?
ವಿ.ವಿ.ಗಳಲ್ಲಿ ಕುಲಪತಿ ನೇಮಕ ಸಂಬಂಧಿಸಿ ನಡೆದಿರುವ ಬೆಳವಣಿಗೆ ಗಮನದಲ್ಲಿ ಇಟ್ಟುಕೊಂಡು ಈ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಸೃಷ್ಟಿಸಲು ಸಮಾವೇಶ ಆಯೋಜಿಸಿರುವ ಸಾಧ್ಯತೆಗಳಿವೆ.

ವಿಶ್ವವಿದ್ಯಾಲಯ ಕುಲಪತಿ ನೇಮಕ ಸಂಬಂಧಿಸಿ ನಾನ್ ಬಿಜೆಪಿ ಅಡಳಿತ ರಾಜ್ಯಗಳ ಸಮಾವೇಶ ಇಟ್ಟುಕೊಂಡು ಈ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಸೃಷ್ಟಿಸಲು  ಆಗೋಸ್ಕರ ಸಮಾವೇಶ ಆಯೋಜಿಸಿರುವ ಸಾಧ್ಯತೆಗಳಿವೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!