ಹುಮನಾಬಾದ್.22.ಏಪ್ರಿಲ್.25:- ಇಂದು ಹುಮನಾಬಾದ ಪಟ್ಟಣದ ತಾಲೂಕು ಪಂಚಾಯತ ಕಛೇರಿಯ ಎದುರುಗಡೆ ಭಾರತೀಯ ದಲಿತ್ ಪ್ಯಾಂಥರ್ ತಾಲೂಕ ಶಾಖೆ ರವರು ಆಯೋಜಿಸಿರುವ ಸಿಂಧನಕೇರಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ DEO ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೃತ ಸುಭಾಷ್ ವೀರಪ್ಪ ಭೂರ್ಲೆಕರ್ ಇವರ ಸಾವಿಗೆ ಕಾರಣವಾದವರ ವಿರುದ್ಧ ಸಾಂಕೇತಿಕ ಧರಣಿಯಲ್ಲಿ ಪಾಲ್ಗೊಂಡು ಮೃತರ ಕುಟುಂಬಸ್ಧರಿಗೆ ನ್ಯಾಯ ಒದಗಿಸ ಬೇಕು ಹಾಗೂ ತಪಿಸ್ಥ ಅಧಿಕಾರಿಯ ಮೇಲೆ ಕೂಡಲೆ ಕ್ರಮ ಜರುಗಿಸಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದೆ
ಮೃತ ಸುಭಾಷ್ ವೀರಪ್ಪ ಸಾವಿಗೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಸುಗಂಧ ರವರೆ ನೇರಕಾರಣ ಎಂದು ವಿಚಾರಣೆಯನ್ನು ಕಾಯ್ದಿರಿಸಿ ಜಿಲ್ಲಾ ಪಂಚಾಯತನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯತ ಅಭಿವೃದ್ಧಿ ಅಧಿಕಾರಿ ಸುಗಂಧ ಇವರನ್ನು ಅಮಾನತುಗೂಳಿಸಿರುವುದು ಕುಟುಂಬಕ್ಕೆ ನ್ಯಾಯ ದೂರಕಿಸಿದಂತಾಗಿದೆ.
ಅವರ ಕುಟುಂಬದ ಸದಸ್ಯರೂಬ್ಬರಿಗೆ ಅನುಕಂಪದ ಆಧಾರದಮೇಲೆ ಕೆಲಸ ಒದಗಿಸಿಕೂಡುವ ಕಾರ್ಯ ಪ್ರಮಾಣಿಕವಾಗಿ ನೆರೆವೆರಿಸಲಾಗುವುದು.