ಬೀದರ.14.ಜೂನ್.25:- ಬೀದರ ತೋಟಗಾರಿಕೆ ಮಹಾವಿದ್ಯಾಲಯ, ರಿವರ್ಡ ಯೋಜನೆ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಬೀದರ, ರಾಷ್ಟ್ರೀಯ ಪರೀಕ್ಷೆ ಮತ್ತು ಅಂಶಶೋಧನಾ ಪ್ರಯೋಗಾಲಯಗಳ ಮಾನ್ಯತಾ ಮಂಡಳಿ (ಎನ್ಎಬಿಎಲ್) ಅವರ ಸಹಯೋಗದೊಂದಿಗೆ ಜೂನ್.16 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30 ರವರೆಗೆ ಸೆಮಿನಾರ್ ಹಾಲ್, ತೋಟಗಾರಿಕೆ ಮಹಾವಿದ್ಯಾಲಯ ಬೀದರದಲ್ಲಿ ಎನ್ಎಬಿಎಲ್ ಮಾನ್ಯತೆ ಮತ್ತು ಅದರ ಲಾಭಗಳು ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೀದರ ಕೆಆರ್ಇ ಸೊಸೈಟಿಯ ಕರ್ನಾಟಕ ಆರ್ಟ್ಸ್ ಆ್ಯಂಡ್ ಕಾಮರ್ಸ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ.ರಾಜಮೋಹನ ಪರದೇಶಿ ಭಾಗವಹಿಸಲಿದ್ದಾರೆ. ಹಾಗೂ ಅಧ್ಯಕ್ಷತೆಯನ್ನು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಅವರು ವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಎನ್ಎಬಿಎಲ್ ನಿರ್ದೇಶಕ ಶ್ರೀಕಾಂತ್ ಆರ್., ಎನ್ಎಬಿಎಲ್ ಸಮನ್ವಯಕರಾದ ಅಕ್ಷಯ್ ಜಿ.ಎಂ., ಮಾನಸಿ ಕುಲಕರ್ಣಿ ಅವರುಗಳು ಭಾಗವಹಿಸಲಿದ್ದಾರೆ.