ಬೀದರ.12.ಜೂನ್.25:- SS ಹಾಲಿನ ಕ್ಯಾನ್ ಮತ್ತು ಆPಒಅU ಗಳನ್ನು ಒದಗಿಸಿಕೊಡುವುದರಿಂದ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಬಹಳಷ್ಟು ಉಪಯುಕ್ತವಾಗಲಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ತಿಳಿಸಿದರು.
ಅವರು ಬುಧವಾರದಂದು ಜಿಲ್ಲಾಡಳಿತ ಬೀದರ ಸಂಯುಕ್ತಾಶ್ರಯದಲ್ಲಿ ಬೀದರನ ಕೆ.ಎಮ್.ಎಫ್.ಡೈರಿ ಚಿಕ್ಕಪೇಟದಲ್ಲಿ ಹಮ್ಮಿಕೊಂಡಿದ್ದ ಶ್ರೀ ವೀರೇಂದ್ರ ಹೆಗ್ಗಡೆ ಸಂಸದರು (ದಕ್ಷಿಣ ಕನ್ನಡ) ಇವರ 2023-24ನೇ ಸಾಲಿನ ಸಂಸದರ ಅನುದಾನದಲ್ಲಿ ಬೀದರ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ SS ಹಾಲಿನ ಕ್ಯಾನಗಳು ಹಾಗೂ ಆPಒಅU ಗಳನ್ನು ಒದಗಿಸಿಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಕಳ ಹಾಲು ಮತ್ತು ಎಮ್ಮೆಯ ಹಾಲನ್ನು ಹಾಲಿನ ಈಚಿಣ & Sಓಈ ಖಿesಣ ಮಾಡುವುದರ ಮೂಲಕ 35 ರೂ. ರಿಂದ 65 ರೂ. ಪ್ರತಿ ಲೀಟರ ದೊರಕಲಿದ್ದು, ಅವರ ಆರ್ಥಿಕ ಆದಾಯ ಹೆಚ್ಚಲಿರುವುದರಿಂದ ಈ ಯೋಜನೆಯ ಸದುಪಯೋಗ ಪಡೆದುಕೊಂಡು ಹಾಲು ಉತ್ಪಾದಕರ ಸಹಕಾರ ಸಂಘಗಳು ಆರ್ಥಿಕವಾಗಿ ಬಲವರ್ಧನೆಗೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯ 192 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲಿನ ಕ್ಯಾನ್ಗಳನ್ನು 51 ಲಕ್ಷ ರೂ. ಅನುದಾನದಲ್ಲಿ ಹಾಗೂ 89 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ ಒಂದು ಆPಒಅU ಗಳನ್ನು 97 ಲಕ್ಷ ರೂ. ಅನುದಾನದಲ್ಲಿ ಒದಗಿಸಿಕೊಡಲಾಗಿರುತ್ತದೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಬಿರಾದಾರ, ನಾಗರಾಜ ಪಾಟೀಲ್, ಸಂಗೋಷ ಪಾಟೀಲ್, ಡಾ. ಎಸ್.ಎಸ್. ಹಿರೇಮಠ ಡಾ. ನರಸಪ್ಪಾ ಉಪ ನಿರ್ದೇಶಕರು ಬೀದರ, ಡಾ. ಅಂಕಿತಾ, ಡಾ. ಪ್ರವೀಣ, ಕೆಎಂಎಫ್ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.