ಬೀದರ.11.ಜೂನ್.25:- ಜಿಲ್ಲೆಯಲ್ಲಿ ಬೀಜ ರಸಗೊಬ್ಬರ ಕೊರತೆ ಇರುವುದಿಲ್ಲವೆಂದು ಜಂಟಿ ಕೃಷಿ ನಿರ್ದೇಶಕರಾದ ಜಿಯಾ ಉಲ್ ಹಕ್ ಅವರು ತಿಳಿಸಿದ್ದಾರೆ.
ಈಗಾಗಲೇ ಮುಂಗಾರು ಬಿತ್ತನೆಗೆ ಬೀಜ, ರಸಗೊಬ್ಬರ ಮಾರಾಟ ಜೋರಾಗಿವುದರಿಂದ ಕೃಷಿ ಇಲಾಖೆ ಭರದ ಸಿದ್ದತೆಯನ್ನ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸೋಯಾ 2.25 ಸಾವಿರ ಹೆಕ್ಟರ್, ತೊಗರಿ 1.18 ಸಾವಿರ ಹೆಕ್ಟರ್, 20 ಸಾವಿರ ಹೆಕ್ಟರ್ ನಲ್ಲಿ ಉದ್ದು ಬಿತ್ತನೆಯಾಗಲಿದೆ. ಎಲ್ಲಾ 30 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ಸಂಗ್ರಹಿಸಲಾಗಿದ್ದು ಅತಿ ಹೆಚ್ಚು ಸೊಯಾ ಬಿತ್ತನೆಗೆ ಗಡಿ ಜಿಲ್ಲೆಯಲ್ಲಿ ರೈತರು ಮುಂದಾಗಿದ್ದಾರೆoದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 95 ಸಾವಿರ ಕ್ವಿಂಟಾಲ್ ಬೀಜಗಳ ಸಂಗ್ರಹ ಲಭ್ಯವಿರುತ್ತದೆ. 37 ಸಾವಿರ ಕ್ಬಿಂಟಾಲ್ ವಿವಿಧ ರಸಗೊಬ್ಬರ ಬೇಡಿಕೆ ಇರುವುದರಿಂದ ಈಗಾಗಲೆ ಮೂರುವರೆ ಸಾವಿರ ಕ್ವಿಂಟಾಲ್ ಡಿಎಪಿ, ಯೂರಿಯಾ ಗೊಬ್ಬರದ ಸ್ಟಾಕ್ ಸಾಕಷ್ಟು ಪ್ರಮಾಣದಲ್ಲಿದ್ದು ಉಳಿದ ರಸಗೊಬ್ಬರ ಸಮಯಕ್ಕ ಸರಿಯಾಗಿ ಜಿಲ್ಲೆಗೆ ಬರಲಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬೀಳುತ್ತಿರುವುದರಿಂದ ರೈತರು ಬಿತ್ತನೆಗೆ ಮುಂದಾಗಿದ್ದಾರೆoದು ಅವರು ತಿಳಿಸಿದ್ದಾರೆ.