ಬೀದರ.04.ಜೂನ್.25:- ಹಿರಿಯ ಪತ್ರಕರ್ತ ವೆಂಕಟೇಶ ಮೊರಖಂಡಿಕರ್ ಗೆ ವಿಕಾಸ ವೇದಿಕೆ ಮಾಧ್ಯಮ ಮಿಲನ ೨೦೨೫ ಪ್ರಶಸ್ತಿ
ಬೀದರ್: ಬೀದರ್ ಜಿಲ್ಲೆಯ ಹಿರಿಯ ಹಾಗೂ ಹೆಮ್ಮೆಯ ಪತ್ರಕರ್ತ ಹೊಸ ದಿಗಂತ ಕನ್ನಡ ದಿನಪತ್ರಿಕೆಯ ಜಿಲ್ಲಾ ವರದಿಗಾರ ವೆಂಕಟೇಶ ಮೊರಖಂಡಿಕರ್ ಅವರಿಗೆ ರಾಜ್ಯ ಮಟ್ಟದ ಸಮಾನ ಮನಸ್ಕ ಪತ್ರಕರ್ತರ *ವಿಕಾಸ ವೇದಿಕೆಯ* ಮಾಧ್ಯಮ ಮಿಲನ ೨೦೨೫, ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ದಿ. ದಿಗಂಬರ ಗರುಡ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಕಾರ್ಯಕ್ರಮ ಹುಬ್ಬಳ್ಳಿಯ ಲಿಂಗರಾಜ ನಗರದ ಶ್ರೀ ಉತ್ತರಾದಿ ಮಠದ, ಪ್ರಮೋದಾತ್ಮ ಭವನದಲ್ಲಿ ಆಯೋಜಿಸಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕರಾದ ಶ್ರೀ ವಿಶ್ವಾಸ ವೈದ್ಯ, ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಖ್ಯಾತ ಉದ್ಯಮಿ ಶ್ರೀ ಗೋವಿಂದ ಜೋಶಿ, ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಧಾರವಾಡ ಮಾಡಿದರು.
ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ಶ್ರೀ ಬಂಡು ಕುಲಕರ್ಣಿ, ಹೊಸ ದಿಗಂತ ಪತ್ರಿಕೆಯ ಬ್ಯುರೋ ಮುಖ್ಯಸ್ಥರು ಶ್ರೀ ವಿಠ್ಠದಾಸ ಕಾಮತ್, ಸಂಯುಕ್ತ ಕರ್ನಾಟಕ ಮತ್ತು ಕನ್ನಡಪ್ರಭ ಪತ್ರಿಕೆಯ ಸಂಪಾದಕರಾದ ಶ್ರೀ ವೆಂಕಟನಾರಾಯಣ, ಧಾರವಾಡ ಆಕಾಶವಾಣಿ ಕೇಂದ್ರದ ನಿವೃತ್ತ ನಿರ್ದೇಶಕರಾದ ಶ್ರೀ ಸತೀಶ್ ಪರ್ವತೀಕರ್, ದಿನ ಹಿಂದೂ ಪತ್ರಿಕೆಯ ಹಿರಿಯ ಪತ್ರಕರ್ತ ಶ್ರೀ ಟಿ.ಎಸ್.ರಂಗಣ್ಣ, ಹಿರಿಯ ಪತ್ರಕರ್ತ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಪ್ರಥಮ ಅಧ್ಯಕ್ಷರಾದ ಶ್ರೀ ತೋ.ಚ.ಅನಂತಸುಬ್ಬಾರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರು ಪಂಡಿತ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ, ಬ್ರಹ್ಮಾಂಡ ಬ್ರಾಹ್ಮಣ ಮಹಾಸಂಘ (ಕೇಂದ್ರ ಹಾಗೂ ರಾಜ್ಯ ಸರಕಾರಿ ನಿವೃತ್ತ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ), ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಧಾರವಾಡ ಜಿಲ್ಲೆ, ಅಗಸ್ತ್ಯ ವಾಹಿನಿ, ವಿಪ್ರ ಬ್ಯುಸಿನೆಸ್ ಫೋರಂ ಹುಬ್ಬಳ್ಳಿ, ವಿಶ್ವ ವಿಪ್ರ ಸೇವಾ ಟ್ರಸ್ಟ್, ಇವರುಗಳ ಸಂಯುಕ್ತ ಸಹಕಾರದಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಉತ್ತರಾದಿ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಪಂಡಿತ್ ಪ್ರಸನ್ನಾಚಾರ್ಯ ಕಟ್ಟಿ ವಹಿಸಿದ್ದರು.
