08/06/2025 7:00 PM

Translate Language

Home » ಲೈವ್ ನ್ಯೂಸ್ » ಸರಕಾರಿ ಪ್ರಥಮ ದರ್ಜೆ ದರ್ಜೆ ಕೊಲೇಜಗೆ ದಿಢೀರ್ ಭೇಟಿ ನೀಡಿದ ರಿಜಿಸ್ಟ್ರಾರ್ ಲೋಕನಾಥ್ ಪರಿಶೀಲನೆ

ಸರಕಾರಿ ಪ್ರಥಮ ದರ್ಜೆ ದರ್ಜೆ ಕೊಲೇಜಗೆ ದಿಢೀರ್ ಭೇಟಿ ನೀಡಿದ ರಿಜಿಸ್ಟ್ರಾರ್ ಲೋಕನಾಥ್ ಪರಿಶೀಲನೆ

Facebook
X
WhatsApp
Telegram

ಚಿಕ್ಕಬಳ್ಳಾಪುರ.04.ಜೂನ್.25:- ನಗರದ ಎಂಜಿ ರಸ್ತೆಯ ಸರಕಾರಿ ಪದವಿ ಕಾಲೇಜಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಲೋಕನಾಥ್ ಭೇಟಿ ನೀಡಿ ಜೂ.9ರಂದು ನಡೆಯಲಿರುವ ಸ್ನಾತಕ ಪದವಿ ಪರೀಕ್ಷೆ ಸಂಬಂಧ ಕೊಠಡಿಗಳ ಪರಿಶೀಲನೆ ಮಾಡಿದರು.

ನಗರದ ಎಂಜಿ ರಸ್ತೆಯ ಸರಕಾರಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ್ದ ವೇಳೆ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಈ ಬಾರಿ ಸ್ನಾತಕ ಪದವಿ ಪರೀಕ್ಷೆಯನ್ನು ಪಾರದರ್ಶಕ ವಾಗಿ ಗುಣಮಟ್ಟವನ್ನು ಹೆಚ್ಚು ಮಾಡುವ ಉದ್ದೇಶದಿಂದ ಪರೀಕ್ಷೆಗೆ ಮುನ್ನವೇ ಭೇಟಿ ನೀಡು ತ್ತಿದ್ದೇವೆ.

ವಿಶೇಷವಾಗಿ ಎಂ.ಜಿ. ರೋಡ್ ಸರಕಾರಿ ಪದವಿ ಕಾಲೇಜಿನಲ್ಲಿ ಗೋಡೆಗಳು ಕೈಬರಹದಿಂದ ತುಂಬಿಹೋಗಿವೆ.ಇದು ಪರೀಕ್ಷಾ ಪಾವಿತ್ರ್ಯವನ್ನು ಹಾಳು ಮಾಡುವಂತೆ ಇದೆ.

ಎಲ್ಲೆಲ್ಲಿ ಗೋಡೆಯ ಮೇಲೆ ಬರೆಯಲಾಗಿದೆಯೋ ಅದಕ್ಕೆ ಸುಣ್ಣ ಬಣ್ಣ ಬಳಿದು ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದೇನೆ.ಅವರು ಕೂಡ ನಮ್ಮ ಮನವಿಗೆ ಒಪ್ಪಿ ಪರೀಕ್ಷೆಯನ್ನು ವಿಶ್ವವಿದ್ಯಾಲಯದ ಮಾನ ದಂಡಗಳಿಗೆ ಅನುಗುಣವಾಗಿ ನಡೆಸಲು ಸನ್ನದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಇದೇ ರೀತಿ ಜಿಲ್ಲೆಯ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಲಾಗುವುದು ಎಂದರು.

ಅತಿಥಿ ಉಪನ್ಯಾಸರನ್ನು ಪರಿಗಣಿಸಲಾಗುವುದು
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಜೂ.14ರಂದು ನಡೆಯುವ ಸ್ನಾತಕ ಪದವಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಚಕ್ಷಣ ಜಾಗೃತದಳದ ಸದಸ್ಯರನ್ನು ನೇಮಕ ಮಾಡಿಕೊಳ್ಳುವಾಗ ಜವಾಬ್ದಾರಿ ಯನ್ನು ನುರಿತ ಖಾಯಂ ಸಿಬ್ಬಂದಿಗೆ ವಹಿಸುತ್ತೇವೆ. ಅಲ್ಲಿ ಏನೇ ಸಮಸ್ಯೆ ಆದರೂ ಅದಕ್ಕೆ ಅವರೇ ನೇರ ಹೊಣೆಯಾಗಿರುತ್ತಾರೆ. ಇವರೊಟ್ಟಿಗೆ ಅತಿಥಿ ಉಪನ್ಯಾಸಕರನ್ನೂ ಕರ್ತವ್ಯಕ್ಕೆ ನಿಯೋಜಿಸು ತ್ತಿದ್ದೇವೆ. ಯಾಕೆ ಅತಿಥಿ ಉಪನ್ಯಾಸಕ ಸಂಘದವರು ಸುದ್ದಿಗೋಷ್ಟಿ ನಡೆಸಿದ್ದಾರೊ,? ಅಲ್ಲಿ ಏನು ಮಾತನಾಡಿದ್ದಾರೊ? ಗೊತ್ತಿಲ್ಲ.ಅತಿಥಿ ಉಪನ್ಯಾಸಕರ ಮೇಲೆ ನಮಗೆ ಯಾವುದೇ ದುರುದ್ದೇಶ ವಿಲ್ಲ. ಇವರನ್ನು ಬಿಟ್ಟು ಪರೀಕ್ಷೆ ನಡೆಸಲು ಆಗುವುದಿಲ್ಲ ಎಂಬುದು ಸತ್ಯವಾದ ಮಾತು ಎಂದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!