ಬೀದರ.30.ಮೇ.25:- ಬೀದರ-ಕಮಠಾಣಾ ರಸ್ತೆಯ ಚಿದ್ರಿ ಶಿವಾರದಲ್ಲಿರುವ ಹೆದ್ದಾರಿ ಬಸ್ ನಿಲ್ದಾಣದ ಹಿಂದುಗಡೆ ಇರುವ ಒಂದು ಪಾಳು ಬಿದ್ದ ಬಾವಿಯ ನೀರಿನಲ್ಲಿ ದಿನಾಂಕ: 27-03-2025 ರಂದು ಅಂದಾಜು 40-45 ವರ್ಷದ ಒಂದು ಅಪರಿಚಿತ ವ್ಯಕ್ತಿ ಮೃತ ದೇಹ ಪತ್ತೆಯಾಗಿರುತ್ತದೆ.
ಬೀದರನ ಮಲಗೊಂಡ ಕಾಲೋನಿ ನಿವಾಸಿಯಾದ ರಾಜಾ ಮಿಲಿಂದ ಬಾಬುರಾವ ಅವರ ಲಿಖಿತ ದೂರಿನ ಮೇರೆಗೆ ಯುಡಿಆರ್ ಸಂಖ್ಯೆ: 04/2025 ಕಲಂ.194(3)(Iಗಿ) ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಮೃತ ವ್ಯಕ್ತಿಯು ಅಂದಾಜು 5 ಅಡಿ 3 ಇಂಚ್ ಎತ್ತರ ಇದ್ದು, ಮೈಬಣ್ಣ ಕೊಳೆತ ಸ್ಥಿತಿಯಲ್ಲಿದ್ದು, ಸದೃಢ ಮೈಕಟ್ಟು ಹೊಂದಿದ್ದು, ಮೈಮೇಲೆ ಒಂದು ನೀಲಿ ಬಣ್ಣದ ಡ್ರಾಯರ್ ಇದ್ದಿರುತ್ತದೆ. ಬಲಗೈ ರಟ್ಟೆಯ ಮೇಲೆ ಹಿಂದು ಅಕ್ಷರದಲ್ಲಿ ಓಂ ಅಂತಾ ಆಚ್ಚೇ ಇದ್ದು, ಎಡ ಮುಂಗೈ ಮೇಲೆ ಹಳದಿ ಬಣ್ಣದ ರಬ್ಬರ ಬ್ಯಾಂಡ ಹಾಗೂ ಸಣ್ಣ ಮನಿಗಳ ರುದ್ರಾಕ್ಷಿ ಸರ ಕೈಗೆ ಹಾಕಿದ್ದು ಇದ್ದಿರುತ್ತದೆ.
ಈ ಅಪರಿಚಿತ ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದು ಬಂದಲ್ಲಿ ಗಾಂಧಿಗAಜ ಪೊಲೀಸ್ ಠಾಣೆ ಬೀದರ ದೂರವಾಣಿ ಸಂಖ್ಯೆ: 08482-226233, 9480803448, ಬೀದರ ಪೊಲೀಸ್ ಉಪಾಧೀಕ್ಷಕರ ಕಛೇರಿ ದೂರವಾಣಿ ಸಂಖ್ಯೆ: 08482-226705, 9480803420, ಬೀದರ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08482-226704/112 ಗೆ ಸಂಪರ್ಕಿಸಲು ಬೀದರ ಗಾಂಧಿ ಗಂಜ್ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.