09/06/2025 2:22 AM

Translate Language

Home » ಲೈವ್ ನ್ಯೂಸ್ » ‘ದೇಶ ಸೇವೆಯೆ ಈಶ ಸೇವೆ’- ಪ್ರೊ.ಅಂಬಿಕಾದೇವಿ ಕೊತಮೀರ್

‘ದೇಶ ಸೇವೆಯೆ ಈಶ ಸೇವೆ’- ಪ್ರೊ.ಅಂಬಿಕಾದೇವಿ ಕೊತಮೀರ್

Facebook
X
WhatsApp
Telegram

ಔರಾದ.24.ಮೇ.25:- ಸರಕಾರಿ ಪ್ರಥಮ ದರ್ಜೆ ಕಾಲೇಜು, ಔರಾದ ವತಿಯಿಂದ ಗಣೇಶಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಸೇವೆ ಯೋಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಂಬಿಕಾದೇವಿ ಕೊತಮೀರ್ ಮಾತನಾಡಿ  ಭಾರತ ಸಮನ್ವಯದ ನಾಡಾಗಿದ್ದು, ಸಹೋದರತೆ, ಶಾಂತಿಯನ್ನು ಬಯಸುವ ದೇಶ. ದೇಶದ ಹಿತವೇ ನಮ್ಮ ಹಿತ ಈ ಭಾವನೆ ಪ್ರತಿಯೊಬ್ಬ ಯುವಕರಿಗು ಅನ್ವಯಿಸುತ್ತದೆ ಎಂದರು.

ಉದ್ಘಾಟಕರಾಗಿ ಆಗಮಿಸಿದ ಗಣೇಶಪೂರ ಗಾಮ ಪಂಚಾಯತ ಸದಸ್ಯರಾದ ಶ್ರೀ ಜ್ಞಾನೇಶ್ವರ  ಮಾತನಾಡಿ ಈ ಸಾಲಿನ ರಾಷ್ಟ್ರೀಯ ಸೇವಾ ಯೋಜನ ಶಿಬಿರ ನಮ್ಮ ಗ್ರಾಮದಲ್ಲಿ ನಡೆಸುವ ತೀರ್ಮಾನ ಕೈಗೊಂಡಿರುವುದು ಅತ್ಯಂತ ಸಂತೋಷ ತಂದಿದೆ ಎಂದರು. ಎನ್.ಎಸ್.ಎಸ್ ಘಟಕದ ಸಂಯೋಜಕರಾದ ಹಾಗು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ವಿನಾಯಕ ಕೊತಮೀರ್ ಪ್ರಾಸ್ತಾವಿಕವಾಗಿ ಮಾತನಾಡಿ ಇಂದಿನ ಯುವಕರಲ್ಲಿ ದೇಶಭಕ್ತಿಯ ಅನಿವಾರ್ಯತೆಯನ್ನು ವಿವರಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶಗಳನ್ನು ಕುರಿತು ಉಪನ್ಯಾಸ ನೀಡಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ರಾಮಣ್ಣ ಉಪ್ಪಾರ ಮಾತನಾಡಿ ಇಂದಿನ ಯುವಕರೆ ನಾಳಿನ ನಾಯಕರು ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಸಹನೆ, ಸಮಯ ಪ್ರಜ್ಞೆ, ಆತ್ಮ ವಿಶ್ವಾಸ, ಪರಿಶ್ರಮ ಇಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು.

ವಿದ್ಯಾರ್ಥಿಗಳು ಶ್ರಮದಾನ, ಸ್ವಚ್ಚತಾ ಚಟುವಟಿಕೆಗಳನ್ನು ಮಾಡಿದರು ಇದಕ್ಕು ಮುಂಚೆ ಎನ್.ಎಸ್.ಎಸ್ ಧ್ವಜಾರೋಹಣ ನೆರವೆರಿಸಲಾಯಿತು. ಪ್ರೊ. ವಿನಾಯಕ ಕೊತಮೀರ್ ಸ್ವಾಗತಿಸಿದರು, ಶ್ರೀ ಸುನೀಲ ಮಾಳಗೆ ವಂದಿಸಿದರು ಪ್ರೊ. ಸಂಜುಕುಮಾರ ತಾಂದಳೆ ನಿರುಪಿಸಿದರು ಡಾ. ದಯಾನಂದ ಬಾವುಗೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!