ಬೀದರ.21.ಮೇ.20:- ಜಹಿರಾಬಾದ ತಾಲ್ಲೂಕಿನ ಕೋಹಿರ ಗ್ರಾಮದ ನಿವಾಸಿಯಾದ ಆಫಸರ ಅಬ್ದುಲ್ ಖಯಿಮ (55) ಇವರು ದಿನಾಂಕ: 24-04-2025 ರಂದು ಬಸವಕಲ್ಯಾಣ ತಾಲ್ಲೂಕಿನ ಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ತೋಟಗಾರಿಕೆಯಲ್ಲಿರುವ ಮಾವಿನ ತೋಟ ಕಾಯುವ ಕೆಲಸ ಮಾಡುವ ಸ್ಥಳದಿಂದ ಕಾಣೆಯಾಗಿರುತ್ತಾನೆ.
ಕಾಣೆಯಾದ ಮನುಷ್ 5 ಇಂಚ್ 2 ಅಡಿ ಎತ್ತರ ಇದ್ದು, ನೋಡಲು ಗೋಧಿ ಮೈಬಣ್ಣ ಕಪ್ಪು ಬಿಳಿ ಮಿಶ್ರಿತ ಕೂದಲು, ಕಪ್ಪು ಬಣ್ಣದ ಪ್ಯಾಂಟ ಚೆಕ್ಸ್ ಶರ್ಟ ಧರಿಸಿರುವ ಇವನು ಹಿಂದಿ ಹಾಗೂ ತೆಲಗು ಭಾಷೆಯಲ್ಲಿ ಮಾತನಾಡುತ್ತಾನೆ. ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಸಿ.ಪಿ.ಐ. ಮಂಠಾಳ ಅವರ ಮೊಬೈಲ್: 9844782021, ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ. ಅವರ ಮೊಬೈಲ್: 9480803460ಗೆ ಸಂಪರ್ಕಿಸಲು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.