09/06/2025 12:27 AM

Translate Language

Home » ಲೈವ್ ನ್ಯೂಸ್ » ಭಾರತ ರತ್ನ ಡಾ.ಭೀಮರಾವ ಅಂಬೇಡ್ಕರ ಅವರಿಗೆ ನ್ಯಾಯಮೂರ್ತಿ ಬಿ.ಆರ್. ಗವಾಯಿ.

ಭಾರತ ರತ್ನ ಡಾ.ಭೀಮರಾವ ಅಂಬೇಡ್ಕರ ಅವರಿಗೆ ನ್ಯಾಯಮೂರ್ತಿ ಬಿ.ಆರ್. ಗವಾಯಿ.

Facebook
X
WhatsApp
Telegram

ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾ ಸಾಬ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ ಕ್ಷಣ* ನ್ಯಾಯಮೂರ್ತಿ ಬಿ.ಆರ್. ಗವಾಯಿ: ನ್ಯಾಯಮೂರ್ತಿ ಬಿ.ಆರ್. ಗವಾಯಿ ಸಿಜೆಐ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಮೊದಲ ಬೌದ್ಧ ಧರ್ಮೀಯರು

ಇಂದು ಮೇ 14 ರಂದು ದೇಶದ ಸರ್ವೋಚ್ಚ ನ್ಯಾಯಾಲಯದ 52ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಬಿ. ಆರ್. ಗವಾಯಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನ್ಯಾಯಮೂರ್ತಿ ಗವಾಯಿ ಅವರ ತಂದೆ 1956 ರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಪ್ರಾರಂಭಿಸಿದ ಧರ್ಮಾಂತರ ಚಳವಳಿಯ ಆರಂಭಿ ತಮ್ಮ ಲಕ್ಷಾಂತರ ಅನುಯಾಯಿಗಳ ಸಮ್ಮುಖದಲ್ಲಿ ಬೌದ್ಧ ಧಮ್ಮ ಸ್ವೀಕರಿಸಿದ್ದರು.

ಅದೇ ಸಮಯದಲ್ಲಿ ಬಿ. ಆರ್. ಗವಾಯಿ ಅವರ ತಂದೆ ಗವಾಯಿ ರವರು ಕೂಡ ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಆಗ ಐದು ಲಕ್ಷಕ್ಕೂ ಹೆಚ್ಚು ದಲಿತರು ಬೌದ್ಧಧಮ್ಮ ಸ್ವೀಕರಿಸಿದ್ದರು. ಅದಾದ ನಂತರ ಗವಾಯಿಯವರ ಇಡೀ ಕುಟುಂಬ ಬೌದ್ಧ ಧರ್ಮವನ್ನು ಅಳವಡಿಸಿಕೊಂಡಿತು. ನ್ಯಾಯಮೂರ್ತಿ ಗವಾಯಿ ಅವರು ಮತ್ತು ಅವರ ಕುಟುಂಬ ಕೂಡ ಬೌದ್ಧ ಧರ್ಮವನ್ನು ಅಳವಡಿಸಿಕೊಂಡಿದೆ.

ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಇಂದು (ಮೇ 14 ರಂದು) ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹುದ್ದೆಯನ್ನು ಅಲಂಕರಿಸಲಿರುವ ಮೊದಲ ಬೌದ್ಧ ಧರ್ಮೀಯರು ಇವರಾಗಲಿದ್ದಾರೆ. ಇದು ಈ ದೇಶದ ಮೂಲನಿವಾಸಿಗಳಾದ ಬೌದ್ಧರಿಗೆ ಹೆಮ್ಮೆಯ ವಿಷಯವಾಗಿದೆ.

ದಲಿತರಿಗೆ ಕ್ರಾಂತಿ ಭೂಮಿಯಾದ ನಾಗಪುರದ ದೀಕ್ಷಾ ಭೂಮಿಯ ಬೌದ್ಧ ವಿಹಾರದ ಅಭಿವೃದ್ಧಿಗೆ ಗವಾಯಿಯವರ ತಂದೆಯವರ ಕೊಡುಗೆ ಅಪಾರವಾಗಿದೆ. ಇವರ ತಂದೆಯವರು ದೀಕ್ಷಾ ಭೂಮಿಗೆ ಅಧ್ಯಕ್ಷರು ಆಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.

ಅವರು ಮೊನ್ನೆ ಎಂದರೆ ಸೋಮವಾರ ದಂದು ಇಂದ್ರಪ್ರಸ್ಥ ಉದ್ಯಾನವನದಲ್ಲಿರುವ ಶಾಂತಿ ಸ್ತೂಪಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಮತ್ತು ದೇಶದ ಸಂವಿಧಾನವೇ ನನ್ನ ಸರ್ವೋಚ್ಚ ಆಗಿದೆ ಎಂದ ಈ ವೇಳೆ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡುತ್ತ, “ನಿವೃತ್ತಿಯ ನಂತರ ನಾನು ಯಾವುದೇ ಹುದ್ದೆಯನ್ನು ತೆಗೆದುಕೊಳ್ಳುವುದಿಲ್ಲ, ರಾಜಕೀಯಕ್ಕೆ ಸೇರುವ ಯಾವುದೇ ಯೋಜನೆ ನನಗಿಲ್ಲ, ನನ್ನ ತಂದೆ ಮಹಾರಾಷ್ಟ್ರದ ದೊಡ್ಡ ನಾಯಕರಾಗಿದ್ದರೂ, ನಾನು ರಾಜಕೀಯಕ್ಕೆ ಸೇರಲು ಬಯಸುವುದಿಲ್ಲ, ಆ ಕಾಲದ ರಾಜಕೀಯವೇ ಬೇರೆಯಾಗಿತ್ತು.” ಎಂದು ಹೇಳುವ ಮೂಲಕ ರಾಜಕೀಯ ಪಕ್ಷಗಳ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ 6 ರಂದು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಮೇ 14, 2025 ರಿಂದ ಜಾರಿಗೆ ಬರುವಂತೆ ನೇಮಿಸಿದರು.

ನ್ಯಾಯಮೂರ್ತಿ ಗವಾಯಿ ಅವರು ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರು. ಮೇ 13 ರಂದು ಹಾಲಿ ಸಿಜೆಐ ಸಂಜೀವ್ ಖನ್ನಾ ಅವರ ನಿವೃತ್ತಿಯ ಒಂದು ದಿನದ ನಂತರ, ಮೇ 14 ರಂದು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನ್ಯಾಯಮೂರ್ತಿ ಗವಾಯಿ ಅವರ ಸಿಜೆಐ ಅಧಿಕಾರಾವಧಿ ಆರು ತಿಂಗಳಿಗಿಂತ ಹೆಚ್ಚು ಇರುತ್ತದೆ. ಅವರು 23 ನವೆಂಬರ್ 2025 ರಂದು ನಿವೃತ್ತರಾಗಲಿದ್ದಾರೆ.

ಜೈ ಭೀಮ್ ✊
#JusticeBRGavai #SupremeCourt #supremecourtindia #jaibhim @highlight

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!