ಬೀದರ.15.ಮೇ.25:- ಜೇಸ್ಕಾಂ ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಹುಮನಾಬಾದ, ಮನ್ನಾಏಖೇಳ್ಳಿ ಹಾಗೂ ಬಸವಕಲ್ಯಾಣ, ಉಪ-ವಿಭಾಗಗಳಲ್ಲಿ ಮೇ.17 ರಂದು ಗ್ರಾಹಕರ ಕುಂದು-ಕೊರತೆ ನಿವಾರಣಾ ಸಭೆಯನ್ನು ಕಾರ್ಯನಿರ್ವಾಹಕ ಇಂಜಿನಿಯರರು (ವಿ), ಗು.ವಿ.ಸ.ಕಂ.ನಿ ಹುಮನಾಬಾದ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿರುತ್ತದೆ ಎಂದು ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಗಳ ವಿವರ: ಮೇ.17 ರಂದು ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಹುಮನಾಬಾದ ಉಪ-ವಿಭಾಗದ ದುಬಲಗುಂಡಿ ಶಾಖೆ ಕಛೇರಿಯಲ್ಲಿ, ಮನ್ನಾಏಖೇಳ್ಳಿ ಉಪ-ವಿಭಾಗದ ಮನ್ನಾಏಖೇಳ್ಳಿ ಶಾಖೆ ಕಛೇರಿಯಲ್ಲಿ ಹಾಗೂ ಬಸವಕಲ್ಯಾಣ ಉಪ-ವಿಭಾಗದ ಮಂಠಾಳ ಶಾಖೆ ಕಛೇರಿಯಲ್ಲಿ ಸಭೆಗಳು ನಡೆಯಲಿವೆ.
ಆದಕಾರಣ ಸಾರ್ವಜನಿಕರು ಹಾಗೂ ಗು.ವಿ.ಸ.ಕಂ.ನಿ, ಗ್ರಾಹಕರು ಸದರಿ ಸಭೆಯಲ್ಲಿ ಉಪಸ್ಥಿತರಿದ್ದು, ಕುಂದು ಕೊರತೆಯ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.