ಔರಾದ.12.ಮೇ.25:- ಇಂದು ಸರಕಾರಿ ಪ್ರೌಢ ಶಾಲೆ ಭಂಡಾರಕುಮುಟ ತಾ :ಔರಾದ (ಬಿ )ಶಾಲೆಯಲ್ಲಿ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಭಗವಾನ್ ಬುದ್ಧರ ಜಯಂತಿಯನ್ನು ಆಚರಿಸಲಾಯಿತು.ಪಾಲಕರಾದ ಜೈದೇವ ಮೇತ್ರೆ ಬುದ್ಧರ ಜೀವನ ಸಂದೇಶವನ್ನು ತಿಳಿಸಿದರು. ಮುಶಿ ಚಂದ್ರಕಾಂತ ನಿರ್ಮಳೆ ಮಾತನಾಡಿ,
ಬುದ್ಧ ನಮಗೆ ನೀಡಿದ “ಆಸೆಯೇ ದುಃಖಕ್ಕೆ ಕಾರಣ “ಎಂಬ ತತ್ವ ಮತ್ತು ಅಷ್ಟಾನಂಗ ಮಾರ್ಗ ವನ್ನು ಜೀವನದಲ್ಲಿ ಅಳವಡಿಸಿದರೆ ಬದುಕು ಸ್ವರ್ಗವಾಗುತ್ತದೆ ಎಂದುನುಡಿದರು. ಬೌದ್ಧಧರ್ಮ ಹುಟ್ಟಿದ್ದು ಪವಿತ್ರ ಭಾರತದ ನೆಲದಲ್ಲಿ, ಬೆಳೆದದ್ದು ಶ್ರೀಲಂಕಾ, ಜಪಾನ್, ಚೀನಾ ದೇಶಗಳಲ್ಲಿ. ಚೀನಾ ಪಾಕಿಸ್ತಾನಕ್ಕೆ ಬುದ್ದಿವಾದ ಹೇಳಿದ್ರೆ ಇವತ್ತು ಈ ಪರಸ್ಥಿತಿ ಬರುತ್ತಿರಲಿಲ್ಲವೆಂದು ಅಳಲು ತೋಡಿಕೊಂಡರು. ಕಾರ್ಯಕ್ರಮದಲ್ಲಿ ಶ್ರೀರಂಗರಾವ್ ಭೈರಾಳೆ, ಉಮಾಕಾಂತ ಸಲಗರ್, ಕಲ್ಪನಾ sdc, ಶಾಲೆ ಮಕ್ಕಳು ಭಾಗವಹಿಸಿದರು. ಶಿವಮೂರ್ತಿ ಜೀರ್ಗೆ ಸ್ವಾಗತಿಸಿದರು, ಮುರಳಿಧರ ಮೇತ್ರೆ ವಂದಿಸಿದರು. 🌹🙏🙏🙏🌹