09/06/2025 8:29 PM

Translate Language

Home » ಲೈವ್ ನ್ಯೂಸ್ » ಔರಾದದಲ್ಲಿ ಬೌದ್ಧ ಜಯಂತಿ ಉತ್ಸವ

ಔರಾದದಲ್ಲಿ ಬೌದ್ಧ ಜಯಂತಿ ಉತ್ಸವ

Facebook
X
WhatsApp
Telegram

ಔರಾದ.12.ಮೇ.25:- ಔರಾದ ತಾಲೂಕಾ ಆಡಳಿತದ ವತಿಯಿಂದ ತಥಾಗತ ಗೌತಮ ಬುದ್ಧರ ಜಯಂತಿ ಆಚರಣೆ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಬುದ್ಧರ ಭಾವಚಿತ್ರಕ್ಕೆ ಮಾನ್ಯ ತಹಶಿಲ್ದಾರ ಮಹೇಶ್ ಪಾಟೀಲ ರವರು ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಬಾಬುರಾವ ತಾರೆ, ರಾಮಣ್ಣಾ ವಡೆಯರ, ಶಿವಕುಮಾರ ಘಾಟೆ, ಅನೀಲಕುಮಾರ ಮೆಲ್ದೂಡಿ, ಶಿವರಾಜ ಝುಲಾಂಡೆ, ವಿಧ್ಯಾರ್ಥಿ ಬಂದುತ್ವ ವೇದಿಕೆಯ ಜಿಲಾ ಸಂಚಾಲಕ ರತ್ನದೀಪ ಕಸ್ತೂರೆ, ಸಿದ್ಧಪ್ಪಾ ಮುಲಗೆ, ದ.ಸಂ.ಸ ಅಧ್ಯಕ್ಷರು ಪ್ರಕಾಶ ಭಂಗಾರೆ, ದಿನೇಶ್ ಶಿಂದೆ, ಪ್ರವೀಣ ಕಾಂರಂಜೆ, ದಲಿತ ಸೇನೆ ಅಧ್ಯಕ್ಷರು ಸುನೀಲ ಮಿತ್ರಾ,  ಸುಂದರ ಮೇತ್ರೆ, ರವಿ ಯರನಾಳೆ, ದಲಿತ ವಿಧ್ಯಾರ್ಥಿ ಪರಿಷತ್ ಅಧ್ಯಕ್ಷರು ಆನಂದ ಕಾಂಬಳೆ, ಸುಜೀತ ಶಿಂದೆ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ಬುದ್ಧರ ಜೀವನ ದರ್ಶನ ಹಾಗೂ ಅವರ ಶಾಂತಿ, ಸಹೋದರತೆ, ಅಹಿಂಸೆ, ಸಮಾನತೆಗಿರುವ ಆದರ್ಶಗಳ ಕುರಿತು ಚರ್ಚೆ ನಡೆಯಿತು. NSYF ರಾಜ್ಯ ಸಂಚಾಲಕ ಶಿವಕುಮಾರ ಕಾಂಬಳೆ ಮಾತನಾಡಿ, “ಬುದ್ಧರ ತ್ರಿಶರಣ, ಪಂಚಶೀಲ ಮತ್ತು ಅಷ್ಟಾಂಗ ಮಾರ್ಗ ಅನುಸರಿಸುವವರು ಯಶಸ್ವಿ ಜೀವನ ನಡೆಸಬಹುದು,” ಎಂದು ಹೇಳಿದರು. ಅವರು, “ಇಂದು ದೇಶಕ್ಕೆ ಯುದ್ಧವಲ್ಲ, ಬುದ್ಧ ಬೇಕು” ಎಂಬ ಸಂದೇಶವನ್ನು ಒತ್ತಿ ಹೇಳಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!