ಮೈಸೂರು.12.ಮೇ.25:- ಎರಡು ದಶಕದಿಂದ ಆತಿಥಿ ಉಪನ್ಯಸ್ಕರು ಕಾರ್ಯನಿರ್ವಹಿಸಿದ್ದಾರೆಮೈಸೂರು ವಿಶ್ವವಿದ್ಯಾಲಯದಲ್ಲಿ ಇಂದು ಅತಿಥಿ ಉಪನ್ಯಾಸಕರ ಸಂಘ’ದ ಸಭೆ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಶನಿವಾರ ನಡೆಯಿತು.
ಸಂಘವನ್ನು ಕಳೆದ ವರ್ಷ ನೋಂದಣಿ ಮಾಡಲಾಗಿತ್ತು. ಅದರ ನವೀಕರಣ ಹಾಗೂ ಪ್ರಸಕ್ತ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚಿಸಲಾಯಿತು.
ಮಾನಸಗಂಗೋತ್ರಿಯ ಮೈಕ್ರೋಬಯಾಲಜಿ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕ ರಮೇಶ ಕೆ.ಪಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಮಹಾರಾಜ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ನಂದೀಶ್ ಎ.ಎಸ್. ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.
ಹಿಂದಿನ ಕಾರ್ಯದರ್ಶಿ ಹರ್ಷ ವಿಮೆನ್ ನೇತೃತ್ವದಲ್ಲಿ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯಿತು.