10/06/2025 1:14 PM

Translate Language

Home » ಲೈವ್ ನ್ಯೂಸ್ » ಕೆಸ್ತೂರಿನಲ್ಲಿ ರಾಮನವಮಿ ಆಚರಣೆ.

ಕೆಸ್ತೂರಿನಲ್ಲಿ ರಾಮನವಮಿ ಆಚರಣೆ.

Facebook
X
WhatsApp
Telegram

ಚಾಮರಾಜನಗರ.04.ಮೇ.25:-ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ನಾಯಕ ಜನಾಂಗದ ಯಜಮಾನರು ಮತ್ತು ಕುಲಸ್ಥರ ನೇತೃತ್ವದಲ್ಲಿ ಶ್ರೀರಾಮ ಪಟ್ಟಾಭಿಷೇಕ ಹಾಗೂ ರಾಮನವಮಿ ಜಯಂತಿಯನ್ನು  ಶ್ರೀವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ಆಚರಿಸಲಾಯಿತು.

ರಾಮ,ಸೀತೆ, ಲಕ್ಷ್ಮಣ, ಆಂಜನೇಯ ಭಾವಚಿತ್ರಕ್ಕೆ ವಿವಿಧ ಬಗೆಯ ಪುಷ್ಪಗಳಿಂದ ನಮನ ಸಲ್ಲಿಸಿ ರಾಮಪಠಣವನ್ನು ಮಾಡಿದರು.

ಶ್ರೀರಾಮರ ತತ್ವ ಮತ್ತು ಆದರ್ಶಗಳು ಪ್ರಸ್ತುತ ಸನ್ನಿವೇಶಕ್ಕೆ ಅವಶ್ಯಕವಾಗಿದೆ. ವಾಲ್ಮೀಕಿ ಋಷಿಮುನಿಗಳು ರಾಮಾಯಣವನ್ನು ಬರೆದು ಹಿಂದೂ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅಗ್ರಗಣ್ಯಸ್ಥಾನವನ್ನು ಪಡೆದಿದ್ದಾರೆಂದು ಯಜಮಾನರಾದ ನಾಗ ರವರು ತಿಳಿಸಿದರು.
ಕೆಸ್ತೂರು ಗ್ರಾಮದ ಎಲ್ಲಾ ಸಮುದಾಯದ ಯಜಮಾನರು ಮತ್ತು ಮುಖಂಡರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ರಾಮನವಮಿ ಹಿನ್ನಲೆ ಗ್ರಾಮದಲ್ಲಿ ಇಂದು ಅನ್ನ ಸಂತರ್ಪನೆ ಹಾಗೂ ರಾಮ, ಸೀತೆ,ಲಕ್ಷ್ಮಣ  ಅಂಜನೇಯ ರವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಗುತ್ತದೆ.


ಈ‌ ಸಂದರ್ಭದಲ್ಲಿ ಯಜಮಾನರಾದ ಮಣಿಕಂಠ, ನಾಗ,ಪಿ,ಮುಖಂಡರಾದ ವೀರನಾಯ್ಕ, ಚಿನ್ನಸ್ವಾಮಿ ನಾಯ್ಕ, ನಾರಾಯಣಸ್ವಾಮಿ, ಶಿವಣ್ಣನಾಯಕ, ಚಿಕ್ಕ ಯಜಮಾನ ನಾಗ, ವೀರಭದ್ರನಾಯಕ, ರವಿ ಎಚ್, ಉಪ್ಪಿ, ನಿಂಗು,ಮಹೇಶ್, ನಿಂಗರಾಜು,
ವಿವಿಧ ಸಮುದಾಯದ ಯಜಮಾನರು ಮುಖಂಡರು ಹಾಜರಿದ್ದರು.


ವರದಿ.ಪ್ರಸನ್ನಕುಮಾರ್ ಕೆಸ್ತೂರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!