12/06/2025 5:50 PM

Translate Language

Home » ಲೈವ್ ನ್ಯೂಸ್ » ಸಮಾನತೆಯ ಸಿದ್ಧಾಂತ ಸಾರಿದ ವಿಶ್ವಗುರು ಬಸವಣ್ಣನವರು – ಕುಲಪತಿ ಪ್ರೊ.ಬಿ.ಎಸ್.ಬಿರಾದಾರ

ಸಮಾನತೆಯ ಸಿದ್ಧಾಂತ ಸಾರಿದ ವಿಶ್ವಗುರು ಬಸವಣ್ಣನವರು – ಕುಲಪತಿ ಪ್ರೊ.ಬಿ.ಎಸ್.ಬಿರಾದಾರ

Facebook
X
WhatsApp
Telegram

ಬೀದರ.02.ಏಪ್ರಿಲ್.25:- ಜಗತ್ತಿಗೆ ಜೀವಪರ ಕಾಳಜಿಯ, ಸಮಾನತೆಯ ಸಿದ್ಧಾಂತವನ್ನು ತಿಳಿಸಿದ ಮಹಾನುಭಾವರೆಂದರೆ ವಿಶ್ವಗುರು ಬಸವಣ್ಣನವರು ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ಹೇಳಿದರು.
ಅವರು ಬೀದರ ವಿಶ್ವವಿದ್ಯಾಲಯದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.


ಬಸವಣ್ಣನವರ ಕಾಯಕನಿಷ್ಠೆಗೆ, ಪ್ರಭಾವಕ್ಕೆ ಒಳಗಾಗಿ ಅನೇಕ ಮಹಾನುಭಾವರು ದೇಶವಿದೇಶದಿಂದ ಕರ್ನಾಟಕದ ಬಸವಕಲ್ಯಾಣಕ್ಕೆ ಬಂದರು. ಬಸವಕಲ್ಯಾಣದ ಅನುಭವ ಮಂಟಪ ಜಗತ್ತಿನ ಮೊದಲ ಪಾರ್ಲಿಮೆಂಟ್ ಎನಿಸಿಕೊಂಡಿತ್ತು. ಅಲ್ಲಿಗೆ ಬಂದAತಹ ಎಲ್ಲರೂ ಸಮಾನರು. ಸಕಲ ಜೀವರುಗಳಿಗೆ ಲೇಸನೆ ಬಯಸುವ ಬಸವಾದಿ ಶರಣರು ಇಡೀ ಜಗತ್ತಿಗೆ ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದರು ಎಂದರು.


ಪ್ರಾಸ್ತಾವಿಕ ಮಾತುಗಳನ್ನಾಡಿದ ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್.ರವರು ಮಾತನಾಡಿ, ಬಸವಣ್ಣನವರ ಕೀರ್ತಿ ದಶದಿಕ್ಕುಗಳಿಗೂ ಹರಡಿ, ನವ ಸಮಾಜದ ನಿರ್ಮಾಣಕ್ಕೆ, ಶಾಂತಿ, ನೆಮ್ಮದಿಯ ಸಹಬಾಳ್ವೆಯ ಜೀವನಕ್ಕೆ ಕಾರಣವಾಯಿತು. ಜಾತಿ ಭೇದವಿಲ್ಲದ, ಲಿಂಗ ತಾರತಮ್ಯವಿಲ್ಲದ, ವರ್ಗ ತಾರತಮ್ಯವಿಲ್ಲದ ಸಮಾಜವನ್ನು ಕಟ್ಟ ಬಯಸಿದ ಶರಣರು ನಡೆದಂತೆ ನುಡಿದರು, ನುಡಿದಂತೆ ನಡೆದರು, ಅವರ ಆದರ್ಶಗಳು, ವಿಚಾರಧಾರೆಗಳು ನೂರಾರು ವರ್ಷಗಳು ಕಳೆದರೂ ಇಂದಿಗೂ ಜೀವಂತವಾಗಿವೆ ಎಂದರು.


ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಾಹಿತಿಗಳಾದ ಡಾ.ರಾಮಚಂದ್ರ ಗಣಾಪೂರರವರು ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನವರು ಸಮಾನತೆಯ ಹರಿಕಾರರಾಗಿ ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ದುಡಿದವರು. ತಮ್ಮ ಅಮೂಲ್ಯ ವಚನಗಳ ಮೂಲಕ ಅಂದಿನ ಸಮಾಜದಲ್ಲಿನ ಅಂಧಃಕಾರ, ಅನಾಚಾರ, ಮೂಢನಂಬಿಕೆಗಳ ಸಂಕೋಲೆಗಳಿAದ ಜನರನ್ನು ಮುಕ್ತಗೊಳಿಸುವ ವಿಶ್ವಗುರುವಾದರು. ತಾರತಮ್ಯವಿಲ್ಲದ ಸಮಾಜದ ನಿರ್ಮಾಣದಲ್ಲಿ ಜಗಜ್ಯೋತಿ ಬಸವಣ್ಣನವರ ಕೊಡುಗೆ ಅಪಾರವಾದುದು. ಅವರ ವಚನಗಳು ಇಂದಿಗೂ ಜನಮಾನಸದಲ್ಲಿ ದಾರಿದೀಪವಾಗಿವೆ ಎಂದರು.


ಈ ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ ವಿ.ಗಬಾಡಿ, ಉಪಸ್ಥಿತರಿದ್ದರು. ಕಾರ್ಯಕ್ರಮವು ಡಾ.ಶಾಂತಕುಮಾರ ಚಿದ್ರಿಯವರ ವಚನಗಾಯನದೊಂದಿಗೆ ಆರಂಭವಾಯಿತು. ಡಾ.ಶಿವಕುಮಾರ ಸಂಗನ್‌ರವರು ಸರ್ವರನ್ನು ಸ್ವಾಗತಿಸಿದರು, ಡಾ.ಶ್ರೀಕೃಷ್ಣ ಚಕ್ರವರ್ತಿ ವಂದಿಸಿದರು. ಡಾ.ಅರುಣಕುಮಾರ ಬೇಂದ್ರೆ ನಿರೂಪಿಸಿರು. ಸಮಾರಂಭದಲ್ಲಿ ಬೀದರ ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!