10/06/2025 2:02 AM

Translate Language

Home » ಲೈವ್ ನ್ಯೂಸ್ » ಏಳನೇ ಸುತ್ತಿನ ಕಾಲುಬಾಯಿಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಏಳನೇ ಸುತ್ತಿನ ಕಾಲುಬಾಯಿಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

Facebook
X
WhatsApp
Telegram

ಬೀದರ.28.ಏಪ್ರಿಲ್.25:- ಜಾನುವಾರು ಕಂದಮ್ಮ ದೇಶದ ಸಂಪತ್ತು, ಅದನ್ನು ಉಳಿಸಿ ಬೆಳೆಸಲು ಸಾಂಕ್ರಾಮಿಕ ರೋಗಗಳಲ್ಲಿ ಒಂದಾದ ಕಾಲುಬಾಯಿಜ್ವರ ರೋಗವನ್ನು ತಡೆಗಟ್ಟಲು ತಪ್ಪದೇ ಲಸಿಕೆ ಹಾಕಿಸಬೇಕು ಹಾಗೂ ಜೊತೆಗೆ ಎಲ್‌ಎಸ್‌ಎಲ್ ಲಸಿಕೆಯನ್ನು ಕೊಡಲಾಗುತ್ತಿದ್ದು ಈ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಬೀದರ ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಗಣೇಶ ಭೋಸ್ಲೆ ತಿಳಿಸಿದರು.


ಅವರು ಶನಿವಾರದಂದು ಶ್ರೀ ಲಕ್ಷಿö್ಮo  ಸತ್ಯನಾರಾಯಣ ಗೋಶಾಲೆ ಬೀದರದಲ್ಲಿ ಹಮ್ಮಿಕೊಂಡಿದ್ದ 7ನೇ ಸುತ್ತಿನ ಕಾಲುಬಾಯಿಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


7ನೇ ಸುತ್ತಿನ ಕಾಲುಬಾಯಿಜ್ವರ ಲಸಿಕಾ ಕಾರ್ಯಕ್ರಮವು ಏ.26 ರಿಂದ ಜೂನ್.9 ರವರೆಗೆ ನಡೆಯುತ್ತಿದ್ದು, ತಪ್ಪದೇ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಡಾ.ನರಸಪ್ಪ ಉಪನಿರ್ದೇಶಕರು, ಬೀದರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ನರಸಪ್ಪ ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ಸುನೀಲ ಗೌಳಿ, ಡಾ. ಶಿವಶರಣ ಯಲಗೋಡ, ಕೆವಿಎ ಅಧ್ಯಕ್ಷರು, ಡಾ.ಓಂಕಾರ ಪಾಟೀಲ, ಡಾ.ನೀಲಕಂಠ, ಡಾ.ಶ್ರೀಕಾಂತ ಬಿರಾದಾರ, ಡಾ.ವಿಶ್ವನಾತ ಸ್ವಾಮಿ, ಡಾ.ಮಿರ್ಜಾ ಮುಬಿದ್ದಿನ್ ಬೇಗ್, ಡಾ.ದೀಪಕ ಬಿರಾದಾರ, ಡಾ.ಜಗದೀಶ ಬಿರಾದಾರ, ಡಾ.ಸಂಧ್ಯಾರಾಣಿ ಹಾಗೂ ಸದಸ್ಯರುಗಳಾದ ಉಮೇಶ ಸಿರ್ಸೆ, ದಯಾನಂದ, ಸುನೀಲಕುಮಾರ, ಜಗನ್ನಾತ, ಸೋಮನಾತ, ಹಸನಮೊಹ್ಮದ, ಇಲಿಯಾಸ್, ಸೈಯ್ಯದ ಆರೀಫ್ ಹಾಗೂ ಲಕ್ಷಿö್ಮo ನಾರಾಯಣ ಟ್ರಸ್ಟ್ ಗೋಶಾಲೆಯ ಸಂತೋಷ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!