ಬೀದರ್.28.ಏಪ್ರಿಲ್.25:- ವಕ್ಫ್ ತಿದ್ದುಪಡಿ ಅಧಿನಿಯಮ 2025ರ ವಿರುದ್ಧ ನಾಳೆ ದಿನಾಂಕ ಏಪ್ರಿಲ್ 28 ರಂದು ನಗರದಲ್ಲಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಜ್ಯಾತ್ಯತೀತ ಸಂಘಟನೆಗಳ ವತಿಯಿಂದ ಪ್ರತಿಭಟನೆ
೨೭ ಅಪ್ರೆಲ್
ವಕ್ಫ್ ತಿದ್ದುಪಡಿ ಅಧಿನಿಯಮ 2025ರ ವಿರುದ್ಧ ಬೀದರ್ ಜಿಲ್ಲೆಯ ದಲಿತ ಮತ್ತು ಮುಸ್ಲಿಮ್ ಸಂಘಟನೆಗಳು ನಾಳೆ ಬೃಹತ್ ರ್ಯಾಲಿ ಮತ್ತು ಪ್ರತಿಭಟನೆಯನ್ನು ಆಯೋಜಿಸಿದೆ.
ಪ್ರತಿಭಟನಾ ರ್ಯಾಲಿ ಬೆಳಗ್ಗೆ 10 ಗಂಟೆಗೆ ಬೀದರ್ ಐತಿಹಾಸಿಕ ಜಾಮಾ ಮಸೀದಿಯಿಂದ ಪ್ರಾರಂಭವಾಗಿ ಮಹ್ಮೂದ್ ಗವಾನ್ ಚೌಕದ ಮೂಲಕ ಅಂಬೇಡ್ಕರ್ ವೃತ್ತವನ್ನು ತೆರಳಿ, ಅಂಬೇಡ್ಕರ್ ವೃತ್ತದ ಬಳಿ ಸಾರ್ವಜನಿಕ ಸಭೆ ನಡೆಯಲಿದೆ.
ನಂತರ ಜಿಲ್ಲಾಧಿಕಾರಿ ಅವರ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಮನವಿ ಪತ್ರ (ಸ್ಮರಣಿಕೆ) ಸಲ್ಲಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.