ಬೀದರ.26.ಏಪ್ರಿಲ್.25:- ಕರ್ನಾಟಕ ರಾಜ್ಯದ ಹಜ್ ಮಂಡಳಿಯ ಮಾಜಿ ಅಧ್ಯಕ್ಷರಾದ ರೌಫುದ್ದೀನ್ ಕಚೇರಿವಾಲೆಯವರನ್ನು ಭಾರತೀಯ ಜನತಾ ಪಕ್ಷದಿಂದ ೬ ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಸೋಮನಾಥ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಂದ್ರ ಸರ್ಕಾರದ ಐತಿಹಾಸಿಕ ವಕ್ಫ ತಿದ್ದುಪಡಿಯ ಬಿಲ್ಲುನ್ನ ವಿರೋಧಿಸಿ ಕಾಂಗ್ರೇಸ್ ಹಾಗೂ ಕೆಲ ಮುಸ್ಲಿಂ ಮುಖಂಡರ ಜೊತೆ ಸೇರಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ರೌಫುದ್ದೀನ್ ಕಚೇರಿವಾಲೆ ಪಾಲ್ಗೊಂಡಿದ್ದಕ್ಕೆ ಕಾರಣ ಕೇಳಿ ದಿನಾಂಕ ೧೮-೦೪-೨೦೨೫ ರಂದು ರೌಫುದ್ದೀನ್ ಕಚೇರಿವಾಲೆಗೆ ಪಕ್ಷದಿಂದ ನೋಟಸ್ ನೀಡಲಾಗಿತ್ತು. ನೀಡಿರುವ ನೋಟಿಸಿಗೆ ಇಲ್ಲಿಯವರೆಗೆ ಸ್ಪಷ್ಠಿಕರಣ ನೀಡಲಿರುವುದರಿಂದ ರೌಫುದ್ದೀನ್ ಕಚೇರಿವಾಲೆ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ೬ ವರ್ಷಗಳ ಕಾಲ ಪಕ್ಷದಿಂದ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷರಾದ ಲಿಂಗರಾಜ ಪಾಟೀಲ ಅವರು ದಿನಾಂಕ ೨೫-೦೪-೨೦೨೫ ರಂದು ರೌಫುದ್ದೀನ್ ಕಚೇರಿವಾಲೆ ಇವರನ್ನು ಉಚ್ಛಾಟಿಸಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷರಾದ ಸೋಮನಾಥ ಪಾಟೀಲ ಅವರು ಪ್ರಕಟಿಸಿದ್ದಾರೆ.