09/06/2025 4:28 AM

Translate Language

Home » ಲೈವ್ ನ್ಯೂಸ್ » ವಕ್ಫ್ ತಿದ್ದುಪಡಿ ವಿಧೇಯಕ ಅಂಗೀಕಾರದ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ.ಕೇಂದ್ರ ಸರ್ಕಾರ!

ವಕ್ಫ್ ತಿದ್ದುಪಡಿ ವಿಧೇಯಕ ಅಂಗೀಕಾರದ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ.ಕೇಂದ್ರ ಸರ್ಕಾರ!

Facebook
X
WhatsApp
Telegram

ಹೊಸ ದೆಹಲಿ.15.ಏಪ್ರಿಲ್.25:- ವಕ್ಫ್ ತಿದ್ದುಪಡಿ ಮಸೂದೆ ಎರಡೂ ಸದನಗಳಲ್ಲಿ ಬೆಂಬಲ ದೊರೆತ ಬೆನ್ನಲ್ಲೇ,  ಈಗ ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಮುಂದಿಡಲು ಮಾಡಲು ಸಿದ್ಧತೆ.

ಮೂಲಗಳ ಪ್ರಕಾರ, ವಕ್ಫ ಮಸೂದೆಗೆ ಜೆಡಿಯು, ಟಿಡಿಪಿ, ವೈಎಸ್‌ಆರ್‌ಸಿಪಿ ಮತ್ತು ಬಿಜೆಡಿಯಂತಹ ಪಕ್ಷಗಳ ಬೆಂಬಲ ಸಿಕ್ಕಿದ್ದು, ಯುಸಿಸಿಯತ್ತ ಗಮನ ಹರಿಸಲು ಸರ್ಕಾರಕ್ಕೆ ಪ್ರೇರಣೆಯಾಗಿದೆ.

ಈ ಕಾನೂನಿನ ಮೂಲಕ ವಿವಾಹ, ವಿಚ್ಛೇದನ, ಆಸ್ತಿ ಮತ್ತು ಇತರ ವೈಯಕ್ತಿಕ ವಿಷಯಗಳಿಗೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಕೊರತೆಯಾದರೂ, ಜೆಡಿಯು ಮತ್ತು ಟಿಡಿಪಿಯಂತಹ ಮಿತ್ರಪಕ್ಷಗಳ ಬೆಂಬಲದಿಂದ ಸರ್ಕಾರ ರಚನೆಯಾಗಿದೆ. ಈ ಸಂದರ್ಭದಲ್ಲಿ ವಿವಾದಾತ್ಮಕ ವಿಷಯಗಳನ್ನು ಕಡಿಮೆ ಮಾಡಿ, ಒಗ್ಗಟ್ಟಿನ ರಾಜಕೀಯಕ್ಕೆ ಒತ್ತು ನೀಡಲಾಗಿತ್ತು. ಆದರೆ, ವಕ್ಫ್ ಮಸೂದೆಯ ಯಶಸ್ಸಿನಿಂದ ಧೈರ್ಯಗೊಂಡ ಸರ್ಕಾರ, ಈಗ ಯುಸಿಸಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ.

ಈಗಾಗಲೇ ಉತ್ತರಾಖಂಡದಲ್ಲಿ ಯುಸಿಸಿಯನ್ನು ಜಾರಿಗೊಳಿಸಲಾಗಿದ್ದು, ಇದು ದೇಶದ ಮೊದಲ ರಾಜ್ಯವಾಗಿದೆ. ಇದೇ ಮಾದರಿಯನ್ನು ಇತರ ಬಿಜೆಪಿ ಆಡಳಿತದ ರಾಜ್ಯಗಳಾದ ಅಸ್ಸಾಂನಂತಹವು ಅನುಸರಿಸಲು ಚಿಂತಿಸಿವೆ. 23ನೇ ಕಾನೂನು ಆಯೋಗದಲ್ಲಿ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರ ನೇತೃತ್ವದಲ್ಲಿ ಯುಸಿಸಿಯ ಕುರಿತು ಸಮಾಲೋಚನೆಗಳು ನಡೆದಿವೆ. ಈ ಕಾನೂನು ಎಲ್ಲ ಧರ್ಮಗಳ ನಡುವೆ ಸಮಾನತೆಯನ್ನು ತರಲಿದೆ ಎಂದು ಬಿಜೆಪಿ ವಾದಿಸಿದೆ.

ಆದಾಗ್ಯೂ, ಕೆಲವು ವಿರೋಧ ಪಕ್ಷಗಳು ಯುಸಿಸಿಯನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಟೀಕಿಸಿವೆ. ಜಾತ್ಯತೀತ ರಾಷ್ಟ್ರದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡುವುದು ಸವಾಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮುಂದಿನ ಕ್ರಮಗಳು ಗಮನ ಸೆಳೆಯಲಿವೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!