ಔರಾದ್.15.ಏಪ್ರಿಲ್.25:- ಸಮ ಸಮಾಜದ ಕನಸು ಕಂಡು, ಅದನ್ನು ಸಾಕಾರಗೊಳಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. #ಅಂಬೇಡ್ಕರ್ ಅವರ 134ನೇ ಜನ್ಮದಿನದಂದು ಗೌರವದ ನಮನಗಳು.
ನೀರಾವರಿ ಮತ್ತು ಜಲವಾಣಿಜ್ಯದ ಮಹತ್ವವನ್ನು ದೇಶಕ್ಕೆ ತಿಳಿಸಿಕೊಟ್ಟ ಅಗ್ರೇಸರ. ದೇಶದ ಆರ್ಥಿಕ ನಕ್ಷೆ ರೂಪುಗೊಳ್ಳಲು ಅವರ ಚಿಂತನೆಗಳು ಮಾರ್ಗದರ್ಶಕವಾಗಿವೆ.
ಅಸ್ಪೃಶ್ಯತೆ ಮತ್ತು ಜಾತಿವಾದದ ವಿರುದ್ಧ ಸಮರ ಸಾರಿ, ಶಿಕ್ಷಣ, ಸಂಘಟನೆ, ಹಕ್ಕುಗಳಿಗಾಗಿ ಹೋರಾಟ ಎಂಬ ಅವರ ತಾತ್ವಿಕ ಮಂತ್ರ ಕೋಟ್ಯಾಂತರ ಜನರಿಗೆ ಪ್ರೇರಣಾದಾಯಿಯಾಗಿದೆ.
#AmbedkarJayanti #ಅಂಬೇಡ್ಕರ್_ಜಯಂತಿ
