ಹೊಸ ದೆಹಲಿ.15.ಎಪ್ರಿಲ್.25:- ಬಾಬಾ ಸಾಹೇಬ್ ಡಾ.ಭೀಮರಾವ ಅಂಬೇಡ್ಕರ್ ಅವರ ಜನ್ಮದಿನ ನಿಮಿತ್ಯ. ಸಂವಿಧಾನವು ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದ್ದು, ದೇಶವನ್ನು ಬಲಿಷ್ಠ, ಸ್ಥಿರ ಮತ್ತು ಒಗ್ಗಟ್ಟಿನಿಂದ ಕೂಡಿಸಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದ್ದಾರೆ.
ನವದೆಹಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಿನ್ನೆ ಆಯೋಜಿಸಲಾದ ಮೊದಲ ‘ಡಾ. ಅಂಬೇಡ್ಕರ್ ಸ್ಮಾರಕ ಉಪನ್ಯಾಸ’ದಲ್ಲಿ ಅವರು ಮಾತನಾಡುತ್ತಿದ್ದರು. ಕಳೆದ ವರ್ಷಗಳಲ್ಲಿ ದೇಶವು ವಿವಿಧ ಬಾಹ್ಯ ಆಕ್ರಮಣಗಳು ಮತ್ತು ಆಂತರಿಕ ಅಡಚಣೆಗಳನ್ನು ಎದುರಿಸಿದ್ದರೂ, ಬದಲಾಗುತ್ತಿರುವ ಅಗತ್ಯಗಳಿಗೆ ಹೊಂದಿಕೊಳ್ಳಲು ಕಾಲಕಾಲಕ್ಕೆ ಸಂವಿಧಾನವನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.