10/06/2025 11:32 AM

Translate Language

Home » ಲೈವ್ ನ್ಯೂಸ್ »
43700 ಕುಟುಂಬಗಳ ಸರ್ವೆಗೊಳಪಟ್ಟು ಮೊದಲ ರ‍್ಯಾಂಕ್ ಪಡೆದ ಬೀದರ ಜಿಲ್ಲೆ-ಸಂಸದ ಸಾಗರ ಖಂಡ್ರೆ


43700 ಕುಟುಂಬಗಳ ಸರ್ವೆಗೊಳಪಟ್ಟು ಮೊದಲ ರ‍್ಯಾಂಕ್ ಪಡೆದ ಬೀದರ ಜಿಲ್ಲೆ-ಸಂಸದ ಸಾಗರ ಖಂಡ್ರೆ

Facebook
X
WhatsApp
Telegram

>ವಸತಿ ರಹಿತರ ಆ್ಯಪ್ ಸರ್ವೆ ಕಾರ್ಯ ಪ್ರಾರಂಭ

ಬೀದರ.09.ಏಪ್ರಿಲ್.25:-ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ “ಸರ್ವರಿಗೂ ಸೂರು” ಕಲ್ಪಿಸುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶದ ನಿವೇಶನ ರಹಿತರ, ವಸತಿ ರಹಿತ ಕುಟುಂಬಗಳ ಸರ್ವೇ ಕಾರ್ಯ ಆರಂಭಗೊoಡಿದೆ, ರಾಜೀವ್ ಗಾಂಧಿ ವಸತಿ ನಿಗಮದ ಎಪ್ರಿಲ್.8 ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಬೀದರ ಜಿಲ್ಲೆಯು 43,700 ಕುಟುಂಬಗಳ ಸರ್ವೇಗೊಳಪಟ್ಟು ಮೊದಲ ರ‍್ಯಾಂಕ್ ಪಡೆದಿದೆ ಎಂದು ಬೀದರ ಲೋಕಸಭಾ ಸಂಸದರಾದ ಸಾಗರ ಈಶ್ವರ ಖಂಡ್ರೆ ತಿಳಿಸಿದ್ದಾರೆ.


ಬೀದರ ಜಿಲ್ಲೆಯಲ್ಲಿ 2024-25ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 40546 ಮನೆ ಹಂಚಕೆ ಗುರಿ ನೀಡಲಾಗಿದೆ. ಈ ಪೈಕಿ 14627 ಮನೆ ಮಂಜೂರಾತಿ ಪಡೆಯಲಾಗಿದ್ದು, ರಾಜ್ಯದಲ್ಲಿ ಮೊದಲನೆ ಸ್ಥಾನದಲ್ಲಿದ್ದೆವೆ. ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಆ್ಯಪ್ ಮೂಲಕ ಸರ್ವೆ ಕೈಗೆತ್ತಿಕೊಂಡ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.


ಬೀದರ ಜಿಲ್ಲೆಯು ರಾಜ್ಯದಲ್ಲಿ ಮೊದಲನೆ ಸ್ಥಾನ ಪಡೆಯುವುದರಲ್ಲಿ, ಜಿಲ್ಲಾ ಪಂಚಾಯತಿಯ ವಸತಿ ಶಾಖೆಯ ಯೋಜನಾ ನಿರ್ದೇಶಕರು, ಸಹಾಯಕ ಯೋಜನಾಧಿಕಾರಿಗಳು, ಜಿಲ್ಲಾ ವಸತಿ ನೋಡಲ್ ಅಧಿಕಾರಿ ಹಾಗೂ ಸಿಬ್ಬಂದಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು(ಪಂ.ರಾ), ತಾಲ್ಲೂಕು ಪಂಚಾಯತ ವಸತಿ ನೋಡಲ್ ಅಧಿಕಾರಿ, ಪಂಚಾಯತ ಅಭಿವೃದ್ಧಿ ಅಧಿಕಾರಿ, ಗ್ರೇಡ್-1 &2 ಕಾರ್ಯದರ್ಶಿ, ದ್ವೀತಿಯ ದರ್ಜೆ ಲೆಕ್ಕ ಸಹಾಯಕರು, ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿಗಳಾದ ಡಿ.ಇ.ಓ. ಕರ ವಸೂಲಿಗಾರರು ಇವರುಗಳ ಕಾರ್ಯ ಶ್ಲಾಘನೀಯ ಎಂದು ತಿಳಿಸಿದ್ದಾರೆ.


ಸ್ವಯಂ ಸಮೀಕ್ಷೆ: ಬೀದರ ಜಿಲ್ಲೆಯಲ್ಲಿ 10,471 ಕುಟುಂಬಗಳು ಸ್ವಯಂ ಸಮೀಕ್ಷೆ ಮಾಡಿದರೆ, 33,229 ಗ್ರಾಮ ಪಂಚಾಯತ ಸಿಬ್ಬಂದಿ ಸಹಕಾರದಿಂದ ಸಮೀಕ್ಷೆ ನಡೆದಿದೆ. ಇನ್ನೂ ಬಾಕಿ ಉಳಿದ ವಸತಿ ರಹಿತರು ಹಾಗೂ ನಿವೇಶನ ರಹಿತರು ಸಂಬAದಪಟ್ಟ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಿ ವಸತಿ ರಹಿತರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬಹುದು ಅಥವಾ ವಸತಿ ರಹಿತರು/ ನಿವೇಶನ ರಹಿತರು ತಾವೇ ಖುದ್ದಾಗಿ ಮೊಬೈಲ್ ಆಪ್ಯ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ.

ಪ್ರತಿ ಐದು ವರ್ಷಕೊಮ್ಮೆ ರಾಜೀವಗಾಂಧಿ ವಸತಿ ನಿಗಮವು ವಸತಿ ಸರ್ವೇ ಕಾರ್ಯ ಮುಂದಾಗಿದ್ದು, 2017-18ರ ಬಳಿಕೆ ಈಗ ಮತ್ತೊಂದು ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಏಪ್ರಿಲ್ 30 ರವರೆಗೆರ ನಿವೇಶನರಹಿತ, ವಸತಿರಹಿತ ಕುಟುಂಬಸ್ಥರು ಸರ್ವೇದಲ್ಲಿ ಪಾಲ್ಗೊಂಡು ಸೂರು ಪಡೆದುಕೊಳ್ಳಲು ಸುವರ್ಣಾವಕಾಶವಿದೆ ಎಂದು ಸಂಸದರು ತಿಳಿಸಿದ್ದಾರೆ.

ಯಾರು ಅರ್ಹರು: ವಸತಿ ರಹಿತರು ಹಾಗೂ ನಿವೇಶನ ರಹಿತರು, ಕಚ್ಚಾ ಮನೆ ಹೊಂದಿರುವವರು, ಕುಟುಂಬ ವಾರ್ಷಿಕ ಆದಾಯ 1.80 ಲಕ್ಷಕ್ಕಿಂತ ಮೀರಿರಬಾರದು, ಆಯಾ ಜಿಲ್ಲಾ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ವಸತಿ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.

ಪಂಚಾಯತಿ ಮಟ್ಟದಲ್ಲಿ ಬಿಲ್ ಕಲೆಕ್ಟರ್, ಗ್ರೇಡ್-1 ಕಾರ್ಯದರ್ಶಿ ಮತ್ತು ಪಂಚಾಯತಿ ಅಭಿವೃದ್ದಿ ಅಧಿಕಾರಿ (ಪಿಡಿಓ)ಗಳನ್ನು ಸರ್ವೇಕ್ಷಕರೆಂದು ನಿಯೋಜಿಸಲಾಗಿದೆ. ಅಲ್ಲದೆ ನಿವೇಶನರಹಿತ ಮತ್ತು ವಸತಿರಹಿತರಾಗಿದ್ದವರು ಸ್ವಯಂ ಸಮೀಕ್ಷೆಯೂ ನಡೆಸಬಹುದು.

ಹಿಂದುಳಿದ ವರ್ಗ, ಸಾಮಾನ್ಯ ವರ್ಗದ ಫಲಾನುಭವಿಗಳಾಗಿದ್ದರೆ ಸುಸಜ್ಜಿತ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂ. ಅನುದಾನ ನೀಡಿದರೆ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಫಲಾನುಭವಿಗಳಿಗೆ 1.75 ಲಕ್ಷ ರೂ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!