09/06/2025 8:35 PM

Translate Language

Home » ಲೈವ್ ನ್ಯೂಸ್ » ಬೀದರ | ಮಾಂಜರಾ ನದಿಯಲ್ಲಿ ಸಾವಿರಾರು ಕೋಟಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ!

ಬೀದರ | ಮಾಂಜರಾ ನದಿಯಲ್ಲಿ ಸಾವಿರಾರು ಕೋಟಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ!

Facebook
X
WhatsApp
Telegram

ಬೀದರ.08.ಏಪ್ರಿಲ.25:- ಬೀದರ ಜಿಲ್ಲೆಯ ಭಾಲ್ಕಿ ತಾಲುಕಿನ ವಾಂಜರಖೇಡಾ ಹಾಗೂ ಹುಲಸೂರ ತಾಲೂಕಿನ ಜಾಮಖಂಡಿ ಗ್ರಾಮಗಳ ಮಧ್ಯ ಮಾಂಜರಾ ನದಿಯಲ್ಲಿ ಮರಳು ಮಾಫಿಯಾದಿಂದ ಅಕ್ರಮವಾಗಿ ಮರಳು ತೆಗೆದು ಪಕ್ಕದ ಮಹಾರಾಷ್ಟ್ರದ ಲಾತೂರು ಹಾಗೂ ಉಸ್ಮಾನಾಬಾದ ಜಿಲ್ಲೆಗೆ ಸಾಗಿಸುತ್ತಿದ್ದಾರೆ.

ಸಮುದ್ರದಿಂದ ಮರಳೆತ್ತುವ ರೀತಿ ಅತ್ಯಾಧುನಿಕ ದೋಣಿಗಳನ್ನು ಬಳಸಿ ಮರಳನ್ನು ರಾತ್ರಿ ಸಮಯದಲ್ಲಿ ತೆಗೆದು ದಿನಾಲು ಸಾವಿರಾರು ಟ್ರಾಕ್ಟರ್ ಹಾಗೂ ಟಿಪ್ಪರಗಳ ಮುಖಾಂತರ ಮರಳನ್ನು ಅಕ್ರಮವಾಗಿ ಸಾಗಿಸಿ ಹಗಲಿನಲ್ಲಿ ಸದರಿ ದೊಣಿಗಳನ್ನು ಗಿಡಗಂಟೆಗಳ ಮಧ್ಯ ಅವಿತು ಇಡುತ್ತಿದ್ದಾರೆ.

ಸುತ್ತಿಲಿನ ಗ್ರಾಮಗಳಲ್ಲಿಯ ಮರಳು ಸಂಗ್ರಸುತ್ತಿದ್ದಾರೆ. ಸುಮಾರು ಕಳೆದ ಒಂದು ವರ್ಷಕ್ಕು ಮೇಲ್ಪಟ್ಟು ಅವಧಿಯಿಂದ ಈ ವ್ಯವಹಾರ ನಡೆಯುತ್ತಿರುವುದನ್ನು ಗಮನಿಸಿದರೆ ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮಿಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಈ ಪತ್ರದೊಂದಿಗೆ ಸದರಿ ಅಕ್ರಮ ಧಂದೆಯ ಗೂಗಲ್ ಫೋಟೊ ಹಾಗೂ ಇತರ ಫೋಟೊಗಳನ್ನು ಲಗತ್ತಿಸುತ್ತಿದ್ದು ಈ ಅಕ್ರಮದಿಂದ ಕರ್ನಾಟಕ ರಾಜ್ಯದ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದ್ದುದಲ್ಲದೆ ರಾಜ್ಯ ಸರ್ಕಾರದ ಬೊಕಸಕ್ಕೆ ಸಲ್ಲಬೇಕಾಗಿದ್ದ ನೂರಾರು ಕೊಟಿ ರೂಪಾಯಿ ರಾಯಲ್ಲಿ ನಷ್ಟವಾಗುತ್ತಿದ್ದು. ಸದರಿ ಮರಳು ಮಾಫಿಯಾದವರ ವಿರುದ್ಧ ಎಫ್.ಐ.ಆರ್. ದಾಖಲಿಸಿ ಶಿಕ್ಷೆಗೆ ಒಳಬಡಿಸಿ ರಾಜ್ಯದ ಸಂಪತ್ತನ್ನು ರಕ್ಷಿಸಬೇಕೆಂದು ವಿನಂತಿ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!