ದಾವಣಗೆರೆ.03.ಏಪ್ರಿಲ್.25:- ಕಾಲೇಜು ಶಿಕ್ಷಣ ಇಲಾಖೆ. ಸಿಬ್ಬಂದಿ ಕೊರತೆ ಸೇರಿದಂತೆ ಉನ್ನತ ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಿ, ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರ ಬದ್ಧವಾಗಿದೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಭರವಸೆ ನೀಡಿದರು.
ಹಮ್ಮಿಕೊಳ್ಳುವ ಎಲ್ಲ ರೀತಿಯ ಶೈಕ್ಷಣಿಕ ಸಭೆ, ಸಮಾರಂಭ, ಶೈಕ್ಷಣಿಕ ವಿಚಾರ ಸಂಕಿರಣ ಇತ್ಯಾದಿಗೆ ಭಾಗವಹಿಸುವ ಸರಕಾರಿ ಅಥವಾ ಅನುದಾನಿತ ಕಾಲೇಜಿನ ಪ್ರಾಧ್ಯಾಪಕರು/ಉಪನ್ಯಾಸಕರು ಒಂದು ಸೆಮಿಸ್ಟರ್ಗೆ ನಾಲ್ಕು ಅನ್ಯ ಕಾರ್ಯ ನಿಮಿತ್ತ ರಜೆ ಪಡೆಯಬಹುದು. ಈ ಹಿಂದೆ ಮಿತಿ ಇರಲಿಲ್ಲ. ಕಾಲೇಜು ಪ್ರಾಂಶುಪಾಲರ ಹಂತದಲ್ಲೇ ನಿರ್ಧಾರ ಆಗುತ್ತಿದ್ದ ಕಾರಣ ಯಾರೂ ಪ್ರಶ್ನಿಸುತ್ತಲೂ ಇರಲಿಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲೇ ಹೆಚ್ಚು ಸಮಸ್ಯೆ
ಈ ರೀತಿ ರಜೆ ಪಡೆಯುವವರ ಸಂಖ್ಯೆ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿದೆ. ಹಾಗೆಯೇ ಜಿಲ್ಲಾ ಕೇಂದ್ರದ ಕೆಲವು ಕಾಲೇಜುಗಳಲ್ಲೂ ಈ ಸಮಸ್ಯೆ ಇದೆ ಎನ್ನುತ್ತವೆ ಮೂಲಗಳು.
ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಾಧ್ಯಾಪಕರನ್ನು ಆಹ್ವಾನಿಸುವ ಸಂಘಟನೆಗಳು ಇನ್ನು ಮುಂದೆ ವಿಭಾಗೀಯ ಜಂಟಿ ನಿರ್ದೇಶಕ ರಿಗೆ ಮನವಿ ಸಲ್ಲಿಸಬೇಕು. ಪ್ರಾಂಶುಪಾಲರ ಹಂತದಲ್ಲಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವಂತಿಲ್ಲ.
– ಮಂಜುಶ್ರೀ ಎನ್.,
ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ