09/06/2025 4:59 PM

Translate Language

Home » ಲೈವ್ ನ್ಯೂಸ್ » ಯಳಂದೂರಿನ ಕೆಲ ಸರಕಾರಿ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

ಯಳಂದೂರಿನ  ಕೆಲ ಸರಕಾರಿ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

Facebook
X
WhatsApp
Telegram

ಯಳಂದೂರು: ಬೇಸಿಗೆ ಆರಂಭಗೊಂಡು ಜನರು ಹೆಚ್ಚಿನ ತಾಪಮಾನಕ್ಕೆ ಒಳಗಾಗಿದ್ದಾರೆ.  ಈ ಸಂದರ್ಭದಲ್ಲಿ ಕುಡಿಯುವ ನೀರು, ತಂಪು ಪಾನೀಯ, ಮಜ್ಜಿಗೆ, ಎಳನೀರು, ಕಲ್ಲಂಗಡಿ, ಸೌತೆಕಾಯಿಗಳತ್ತ ಮುಖ ಮಾಡಿ ದೇಹವನ್ನು ತಂಪು ಮಾಡಿಕೊಳ್ಳಲು ಮುಂದಾಗಿದ್ದಾರೆ.

ಅದಲ್ಲದೇ ಪ್ರತಿನಿತ್ಯ ಸಾರ್ವಜನಿಕರು ತಮ್ಮ ಕೆಲಸಗಳ ನಿಮಿತ್ತ ಸರಕಾರಿ ಕಛೇರಿಗಳಿಗೆ ಆಗಮಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಏನಾದರೂ ದಾಹವಾದರೆ ಅವರು ಅಂಗಡಿಗಳಿಗೆ ಹೋಗಿ ಹಣ ನೀಡಿ ಕುಡಿಯುವ ನೀರಿನ ಬಾಟಲ್ ನ್ನು ತೆಗೆದುಕೊಳ್ಳಬೇಕು ಆದರಿಂದ ಸರಕಾರಿ ಕಛೇರಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. 

ಯಳಂದೂರಿನ  ಕೆಲ ಸರಕಾರಿ ಕಛೇರಿಗಳಾದ ಕೃಷಿ ಇಲಾಖೆ, ತಾಲ್ಲೂಕು ಕಛೇರಿ, ತೋಟಗಾರಿಕೆ ಇಲಾಖೆ, ಕುಡಿಯುವ ನೀರು ನೈರ್ಮಲ್ಯ ಇಲಾಖೆ, ಅಭಿಯಂತರರ ಕಛೇರಿ, ಸಿಡಿಪಿಒ ಕಛೇರಿ, ಅರಣ್ಯ ಇಲಾಖೆ, ಇನ್ನೂ ಅನೇಕ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡದೇ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ. ನೀರನ್ನೆ ಕೊಡದವರು ಇನ್ನೂ ಸಾರ್ವಜನಿಕರ ಕೆಲಸ ಮಾಡುತ್ತಾರೋ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಶುದ್ದ ಕುಡಿಯುವ ನೀರನ್ನು ಕಛೇರಿಯೊಳಗೆ ಯಾರಿಗೂ ಕಾಣದೇ ಇರಿಸಿ ತಮ್ಮ ಕಛೇರಿ ಸಿಬ್ಬಂದಿಗಳು ಮಾತ್ರ ಕುಡಿಯುವುದಕ್ಕೆ ಸೀಮಿತವಾಗಿದೆ.

ಬೇಸಿಗೆ ಕಾಲವಾಗಿರುವುದರಿಂದ ದಯವಿಟ್ಟು ಸರಕಾರಿ ಕಛೇರಿಗಳಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಸಾರ್ವಜನಿಕರು ತಿಳಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!