ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು ಐವತ್ತು ಮಾವೋವಾದಿಗಳು ಶರಣಾಗಿದ್ದಾರೆ. ಈ ಪೈಕಿ ಹದಿಮೂರು ಮಾವೋವಾದಿಗಳ ತಲೆಗೆ 68 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.
ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಮಾವೋವಾದಿಗಳು ಒಟ್ಟಿಗೆ ಶರಣಾಗಿರುವುದು ಇದೇ ಮೊದಲು.
ಶರಣಾದವರಲ್ಲಿ ಮಿಲಿಟಿಯಾ ಕಮಾಂಡರ್ಗಳ ಮಟ್ಟದ ಮಾವೋವಾದಿಗಳು ಮತ್ತು ಮಾವೋವಾದಿಗಳ ಪಿಎಲ್ಜಿಎ ಬೆಟಾಲಿಯನ್ ಮತ್ತು ಇತರ ಕಂಪನಿಗಳಲ್ಲಿ ಸಕ್ರಿಯವಾಗಿರುವ ಉಪ ಕಮಾಂಡರ್ಗಳು ಸೇರಿದ್ದಾರೆ ಎಂದು ಬಿಜಾಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ.
ಶರಣಾದ ಮಾವೋವಾದಿಗಳಿಗೆ ರಾಜ್ಯ ಸರ್ಕಾರದ ಪುನರ್ವಸತಿ ನೀತಿಯಡಿಯಲ್ಲಿ ಪ್ರೋತ್ಸಾಹ ಧನವಾಗಿ ತಲಾ 25,000 ರೂಪಾಯಿಗಳ ಚೆಕ್ ನೀಡಲಾಗಿದೆ.
ಬಸ್ತಾರ್ ವಿಭಾಗದ ದೂರದ ಪ್ರದೇಶಗಳಲ್ಲಿ ಹೊಸ ಭದ್ರತಾ ಶಿಬಿರಗಳು ಮತ್ತು ರಸ್ತೆ ನಿರ್ಮಾಣದ ನಿರಂತರ ಸ್ಥಾಪನೆ ಹಾಗೂ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆಯಿಂದಾಗಿ ಸರ್ಕಾರದ ಮೇಲಿನ ಜನರ ನಂಬಿಕೆ ಹೆಚ್ಚಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಹೇಳಿದರು. ಕೆಂಪು ಭಯೋತ್ಪಾದನೆಯನ್ನು ತೊರೆದು ಶಾಂತಿಯ ಹಾದಿಗೆ ಮರಳಿದ ಈ ಜನರ ಪುನರ್ವಸತಿಗೆ ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಅವರು ಹೇಳಿದರು.