ಕಲಬುರಗಿ.28.ಮಾರ್ಚ್.25:- ರಾಜ್ಯಾದ 9 ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕದ 7 ಹಾಗೂ ಕಿತ್ತೂರು ಕರ್ನಾಟಕದ 2 ಸೇರಿ ಒಟ್ಟು 9 ಜಿಲ್ಲೆಗಳಲ್ಲಿ ಬೇಸಿಗೆ ಬಿಸಿಲಿನ ತೀವ್ರತೆ ಹಿನ್ನೆಲೆಯಲ್ಲಿ ಎಪ್ರಿಲ್ನಿಂದ ಸರ್ಕಾರಿ ಕಚೇರಿಗಳ ವೇಳೆ ಬದಲಾಗುವದು ಸರಕಾರ ಆದೇಶ ಬರುವ ನಿರೀಕ್ಷೆ ಇದೆ .
ರಜ್ಯದ ಈ ಭಾಗದಲ್ಲಿ ಬಹಳಷ್ಟು ತಾಪಮಾನ ಏರಿಕೆಯ ಕಾರಣಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿ ಏಳು ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸರಕಾರಿ ಕಚೇರಿಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 1:30ರ ವರೆಗೆ ಕೇವಲ ಐದೂವರೆ ಗಂಟೆ ಕಾರ್ಯನಿರ್ವಹಿಸುತ್ತಿದ್ದವು.
ಆದರೆ ಕಳೆದ ಐದು ವರ್ಷಗಳಿಂದ 2020ರಿಂದ ಕಚೇರಿ ವೇಳೆ ಬದಲು ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು.