ಚಾಮರಾಜನಗರ.27.ಮಾರ್ಚ್.25:- ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿಯ ದೇವಾಲಯದಲ್ಲಿ ಗುರುವಾರ ಬುಧವಾರ ಬೆಳಿಗ್ಗೆ 10 ರಂದು ಹುಂಡಿಯ ಎಣಿಕೆ ಕಾರ್ಯವನ್ನು ತಹಸೀಲ್ದಾರ್ ಬಸವರಾಜು ನೇತೃತ್ವದಲ್ಲಿ ನಡೆಯಿತು.
ಹುಂಡಿಯಲ್ಲಿ 9,74,822 ಹಣ ಸಂಗ್ರಹವಾಗಿದೆ.1 ಯುರೋ ಕರೆನ್ಸಿ ಕೂಡ ಸಂಗ್ರಹವಾಗಿದೆ
ಈ ಸಂದರ್ಭದಲ್ಲಿ, ಬಿಳಿಗಿರಿರಂಗನ ಬೆಟ್ಟ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜಿ ಶ್ರೀನಿವಾಸ್, ಕಾರ್ಯನಿರ್ವಾಹಕ ಅಧಿಕಾರಿ ಮೋಹನ್, ಅರ್ಚಕ ರವಿಕುಮಾರ್ ಸದಸ್ಯರುಗಳಾದ ಕೇತಮ್ಮ,ರಾಜಣ್ಣ, ವೆಂಕಟರಾಮು, ಸಿದ್ದರಾಜು, ಎಂ ಸುರೇಶ್,ವಿ ನಾರಾಯಣಸ್ವಾಮಿ, ದೇವಾಲಯದ ಸಿಬ್ಬಂದಿಗಳಾದ ರಾಜು, ದಫೇದರ್ ಗುರು ಸಿದ್ದಯ್ಯ, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಪ್ರವಾಸಿ ಮಿತ್ರರು ಹಾಜರಿದ್ದರುಪ
ಜಿ ಪ್ರಸನ್ನ ಕುಮಾರ್ ಕಿತ್ತೂರು