16/06/2025 9:34 PM

Translate Language

Home » ಲೈವ್ ನ್ಯೂಸ್ » ವಸತಿ ರಹಿತ ಕುಟುಂಬಗಳ ಪಟ್ಟಿ ತಯ್ಯಾರಿಸಲು ಸಂಸದ ಸಾಗರ ಈಶ್ವರ ಖಂಡ್ರೆ ಸೂಚನೆ

ವಸತಿ ರಹಿತ ಕುಟುಂಬಗಳ ಪಟ್ಟಿ ತಯ್ಯಾರಿಸಲು ಸಂಸದ ಸಾಗರ ಈಶ್ವರ ಖಂಡ್ರೆ ಸೂಚನೆ

Facebook
X
WhatsApp
Telegram

ಬೀದರ.25.ಮಾರ್ಚ.25: ಸರ್ಕಾರದ ವಸತಿ ಯೋಜನೆಗಳ ಸದುಪಯೋಗ ಮಾಡಿಕೊಳ್ಳಲು ಜಿಲ್ಲೆಯ ವಸತಿ ರಹಿತ ಕುಟುಂಬಗಳ ಪಟ್ಟಿ ತಯ್ಯಾರಿಸಿ ತ್ವರಿತ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಬೀದರ ಲೋಕಸಭಾ ಸಂಸದರಾದ ಸಾಗರ ಈಶ್ವರ ಖಂಡ್ರೆ ಸೂಚನೆ ನೀಡಿದರು.


ಅವರು ಬೀದರ ಲೋಕಸಭಾ ಕ್ಷೇತ್ರದಲ್ಲಿ ಪಿ.ಎಂ.ಎ.ವೈ (ಗ್ರಾಮೀಣ ಮತ್ತು ನಗರ) ವಸತಿ ಯೋಜನೆಯ ಅನುಷ್ಠಾನ ಕುರಿತಂತೆ ಬೀದರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.


ಬೀದರ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವ ಗುರಿ ಹೊಂದಿದ್ದು, ಯಾವುದೇ ಕುಟುಂಬವೂ ವಸತಿ ರಹಿತವಾಗಿರಬಾರದು. ಪ್ರಧಾನಮಂತ್ರಿ ಆವಾಸ್ (ಗ್ರಾಮೀಣ) ಯೋಜನೆಯಡಿ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆಯನ್ನು ಮಾರ್ಚ. 31 ರವರೆಗೆ ಕಾಲವಕಾಶ ಇರುವುದರಿಂದ, ಈ ಸಮೀಕ್ಷೆಯಲ್ಲಿ ಎಲ್ಲಾರೂ ಕಡ್ಡಾಯವಾಗಿ ಪಾಲ್ಗೊಂಡು ಸಮೀಕ್ಷೆಯ ಮಾಹಿತಿಯನ್ನು ಂತಿಚಿಚಿsoಜಿಣ Poಡಿಣಚಿಟ ಅಳವಡಿಸಲು ಹಾಗೂ 2024-25ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೀಡಲಾದ ಗುರಿಗೆ ಅನುಗುಣವಾಗಿ ಆದ್ಯತೆಯ ಪಟ್ಟಿಯ ಪ್ರಕಾರ ಫಲಾನುಭವಿಗಳ ಅನುಮೋದನೆ ಪಡೆದು ಬಡ ವಸತಿ ರಹಿತರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂದರು.


ಸರ್ಕಾರದಿಂದ ನಿಗಧಿಪಡಿಸಿದ ಕಾಲಮೀತಿಯೊಳಗಾಗಿ ಸದರಿ ಸಮೀಕ್ಷೆ ಹಾಗೂ ಫಲಾನುಭವಿಗಳ ಅನುಮೋದನೆಯನ್ನು ಯಶಸ್ವಿಗೊಳ್ಳಿಸದೆ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ದ ಶಿಸ್ತು ಕ್ರಮಕೈಗೊಳ್ಳಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರಿಗೆ ಸೂಚಿಸಿದರು.


ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಬೇಸಿಗೆ ಕಾಲ ಪ್ರಾರಂಭವಾಗುತ್ತಿರುವುದರಿAದ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮತ್ತು ಜಲ ಜೀವನ ಮೀಷನ ಯೋಜನೆಯ ನಿಯಮಾನುಸಾರ ಅನುಷ್ಠಾನಗೊಳಿಸಲು ಸಂಸದರು ಸೂಚಿಸಿದರು.


ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ, ಪ್ರಮುಖ ಅಧಿಕಾರಿಗಳು, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಂಬAಧಿತ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!