09/06/2025 6:52 PM

Translate Language

Home » ಲೈವ್ ನ್ಯೂಸ್ » ಕೆಸ್ತೂರು ಪ್ರೌಢಶಾಲೆಯ ವಿದ್ಯಾರ್ಥಿ ಧನುಷ್ ರಾಜ್ಯಪಾಲರಿಂದ ಪ್ರಶಸ್ತಿ ಪಡೆದರು.

ಕೆಸ್ತೂರು ಪ್ರೌಢಶಾಲೆಯ ವಿದ್ಯಾರ್ಥಿ ಧನುಷ್ ರಾಜ್ಯಪಾಲರಿಂದ ಪ್ರಶಸ್ತಿ ಪಡೆದರು.

Facebook
X
WhatsApp
Telegram

ಯಳಂದೂರು.19.ಮಾರ್ಚ.25:-  ಭಾರತ್ ಸ್ಕೌಟ್ ಮತ್ತು ಗೈಡ್ ಕರ್ನಾಟಕ, ಚಾಮರಾಜನಗರ ಜಿಲ್ಲಾ ಸಂಸ್ಥೆ ಯಳಂದೂರು ಸ್ಥಳೀಯ ಸಂಸ್ಥೆ ಕೆಸ್ತೂರು ಸರ್ಕಾರಿ ಪ್ರೌಢಶಾಲೆ  12 ಸ್ಕೌಟ್ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ ಸ್ಕೌಟ್  ಮಾಸ್ಟರ್ ಕುಮಾರ್ ನಾಯಕ್ ರವರ ಮಾರ್ಗದರ್ಶನದಲ್ಲಿ  ವಿವಿಧ ಸ್ಕೌಟ್ ಚಟುವಟಿಕೆಗಳಲ್ಲಿ ಭಾಗವಹಿಸಿ ನಂತರ
2024 25 ನೇ ಸಾಲಿನಲ್ಲಿ ರಾಜ್ಯಪಾಲ ಪುರಸ್ಕಾರ ಪರೀಕ್ಷೆಯಲ್ಲಿ ಭಾಗವಹಿಸಿ ಎಲ್ಲಾ ವಿದ್ಯಾರ್ಥಿಗಳು ರಾಜ್ಯಪಾಲರ ಪುರಸ್ಕಾರ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಇದೇ ಮಾರ್ಚ್ 17  ರಂದು ರಾಜ ಭವನದ ಗಾಜಿನ ಅರಮನೆ ಬೆಂಗಳೂರಿನಲ್ಲಿ ನಡೆದ ರಾಜ್ಯಪಾಲರ ಪುರಸ್ಕಾರ ಅವಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಕೆಸ್ತೂರು ಸರಕಾರಿ ಪ್ರೌಢಶಾಲೆ ಧನುಷ್ ಎಸ್ 10ನೇ ತರಗತಿ ವಿದ್ಯಾರ್ಥಿಯು ಖುದ್ದಾಗಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್   ರವರಿಂದ ರಾಜ್ಯಪಾಲ ಪುರಸ್ಕಾರ ಅವಾರ್ಡನ್ನು ಪಡೆದಿರುತ್ತಾರೆ.

ಉಳಿದ 11 ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ರಾಜ್ಯಪಾಲ ಪುರಸ್ಕಾರ ಅವಾರ್ಡ್ ಅನ್ನು ಜಿಲ್ಲಾಧಿಕಾರಿ ಅವರಿಂದ ನೀಡಲಿದ್ದಾರೆ. ಈ ವಿದ್ಯಾರ್ಥಿಗಳ ಶಿಸ್ತು, ಸಂಯಮ , ದೇಶಪ್ರೇಮ, ಪರಿಸರ ಕಾಳಜಿ, ಸಾಮಾಜಿಕ ಸೇವೆ, ಹಿರಿಯರ ಬಗ್ಗೆ  ಇರುವ ಗೌರವ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಲು ಹರ್ಷವಾಗುತ್ತದೆ.

ಈ ಮೂಲಕ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಗುರುಗಳಿಗೆ ತಮ್ಮ ಪೋಷಕರಿಗೆ ಮತ್ತು ತಮ್ಮ ಗ್ರಾಮಕ್ಕೆ ಕೀರ್ತಿಯನ್ನು ತಂದಿರುತ್ತಾರೆ. ಇವರು ಹೀಗೆ ಸ್ಕೌಟ್ ಚಳುವಳಿಯಲ್ಲಿ ಮುಂದುವರಿಯಲಿ  ಎಂದು ಹಾರೈಸುವವರು ಮುಖ್ಯ ಶಿಕ್ಷಕರಾದ ಶ್ರೀ ಉಮಾಶಂಕರ್ ರವರು, ಎಲ್ಲಾ ಶಿಕ್ಷಕರು, ಪೋಷಕರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಶುಭಕೋರಿದರು.

_ಜಿ ಪ್ರಸನ್ನಕುಮಾರ್ ಕಿತ್ತೂರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!