09/06/2025 2:16 AM

Translate Language

Home » ಲೈವ್ ನ್ಯೂಸ್ » ಪತ್ರಕರ್ತರ ರೈಲ್ವೆ ಪಾಸ್ ವಿಷಯಕ್ಕೆ ಸ್ಪಂದಿಸಿದ
ಬೀದರ ಲೋಕಸಭೆ ಸದಸ್ಯರಿಗೆ ಅಭಿನಂದನೆ

ಪತ್ರಕರ್ತರ ರೈಲ್ವೆ ಪಾಸ್ ವಿಷಯಕ್ಕೆ ಸ್ಪಂದಿಸಿದ
ಬೀದರ ಲೋಕಸಭೆ ಸದಸ್ಯರಿಗೆ ಅಭಿನಂದನೆ

Facebook
X
WhatsApp
Telegram

ಬೀದರ.18.ಮಾರ್ಚ.25:- ಸುಮಾರು ವರ್ಷಗಳಿಂದ ನೆನೆಗುದಿಗೆ ಮಾನ್ಯತೆ ಪಡೆದಿರುವ ಪತ್ರಕರ್ತರ ರೈಲ್ವೆ ರಿಯಾಯಿತಿ ಪಾಸ್ ಮರು ಸ್ಥಾಪನೆಗೆ ಬೀದರ ಯುವ ಸಂಸದರಾದ ಸಾಗರ ಈಶ್ವರ ಖಂಡ್ರೆ ಅವರು ಲೋಕಸಭೆಯಲ್ಲಿ ಪ್ರಶ್ನೆ ಎತ್ತುವುದರ ಮೂಲಕ ಜಿಲ್ಲೆಯ ಪತ್ರಕರ್ತರ ಮನವಿಗೆ ಸ್ಪಂದನೆ ಮಾಡಿದ್ದಾರೆ.


ಈ ಹಿಂದೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಬೀದರ ಜಿಲ್ಲಾ ಘಟಕದ ವತಿಯಿಂದ ಯುವ ಸಂಸದರಾದ ಉತ್ಸಾಹಿ ಸಾಗರ ಈಶ್ವರ ಖಂಡ್ರೆ ಅವರಿಗೆ ಪತ್ರಕರ್ತರಿಗೆ ಜಾರಿಯಲ್ಲಿದ್ದ ರೈಲ್ವೆ ರಿಯಾಯಿತಿ ಪಾಸ್ ಕೋವಿಡ್ ಸಮಯದಲ್ಲಿ ನಿಲ್ಲಿಸಲಾಗಿತ್ತು.

ಈ ಬಗ್ಗೆ ಲೋಕಸಭೆಯಲ್ಲಿ ನಮ್ಮ ಪರವಾಗಿ ಧ್ವನಿ ಎತ್ತುವಂತೆ ನಾವು ಮಾಡಿರುವ ಮನವಿಗೆ ಸ್ಪಂದಿಸಿ ನಿನ್ನೆ ರಾತ್ರಿ ಮಾರ್ಚ.೧೭ ರಂದು ಲೋಕಸಭೆಯಲ್ಲಿ ಸುಧೀರ್ಘಕಾಲ ರೈಲ್ವೆ ವಿಷಯದ ಮೇಲೆ ನಡೆದಿರುವ ಚರ್ಚೆ ಸಮಯದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಕರ್ತರ ರೈಲ್ವೆ ರಿಯಾಯಿತಿ ಪಾಸ್ ಮರು ಚಾಲನೆ ಮಾಡುವಂತೆ ಅವರು ಕೇಂದ್ರ ರೈಲ್ವೆ ಸಚಿವರಿಗೆ ಪ್ರಶ್ನೆ ಎತ್ತುವ ಮೂಲಕ ಗಮನ ಸೆಳೆದಿದಿದ್ದಾರೆ.

ಇದಕ್ಕಾಗಿ ಬೀದರ ಜಿಲ್ಲಾ ಸಂಘದ ವತಿಯಿಂದ ಸಂಸದರಿಗೆ ಹಾರ್ಧಿಕ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸುತ್ತೇವೆ.


ಇದಲ್ಲದೇ ಬೀದರ ಜಿಲ್ಲೆಯ ರೈಲ್ವೆ ಸಂಬoಧಿಸಿದ ಇತರೆ ವಿಷಯಗಳಾದ: ಎನ್.ಚಿ.ಆರ್.ಬಿ. ವರದಿ ಪ್ರಕಾರ ಕಳೆದ ದಶಕದಲ್ಲಿ ೨.೬ ಲಕ್ಷಕ್ಕೂ ಹೆಚ್ಚು ಜನರು ರೈಲ್ವೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಮಸ್ಯೆಗೆ ತ್ವರಿತ ಪರಿಹಾರವಾಗಿ ಏಂಗಿoಅಊ ತಂತ್ರಜ್ಞಾನವನ್ನು ಎಲ್ಲೆಡೆ ಶೀಘ್ರ ಜಾರಿಗೆ ತರಬೇಕು. ಅಮೃತ ಭಾರತ ನಿಲ್ದಾಣ ಯೋಜನೆ ನಿಧಾನಗತಿಯಲ್ಲಿ ನಡೆಯುತ್ತಿದ್ದು ಇದನ್ನು ಶೀಘ್ರಗತಿಯಲ್ಲಿ ಮುನ್ನಡೆಸುವಂತೆ ಆಗ್ರಹಿಸಿದರು. ನನ್ನ ಕ್ಷೇತ್ರದ ಭಾಲ್ಕಿ ಮತ್ತು ಕಮಲನಗರ ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ಯೋಜನೆಯಡಿ ಸೇರ್ಪಡಿಸಿ ಅಭಿವೃದ್ಧಿ ಪಡಿಸಬೇಕು.

ಬೀದರ-ಬೆಂಗಳೂರು ರೈಲುಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಇನ್ನು ಹೆಚ್ಚುವರಿ ೨ ಬೋಗಿಗಳನ್ನು ಸೇರಿಸಲು ಅವಕಾಶವಿದ್ದು, ಬೋಗಿಗಳನ್ನು ಸೇರಿಸಬೇಕು. ಬೀದರ ಕ್ಷೇತ್ರದವರನ್ನು ದೆಹಲಿಗೆ ಸಂಪರ್ಕ ಕಲ್ಪಿಸಲು ದಕ್ಷಿಣ ಎಕ್ಸಪ್ರೆಸ್ ರೈಲನ್ನು ಹೈದರಾಬಾದ್‌ನಿಂದ ಬೀದರಕ್ಕೆ ವಿಸ್ತರಿಸಬೇಕು.

ಬೀದರ-ಬೆಂಗಳೂರು ವಂದೇ ಭಾರತ ರೈಲು ಆರಂಭಿಸಬೇಕು. ತಾಂಡೂರು-ಜಹೀರಾಬಾದ ಹೊಸ ರೈಲು ಮಾರ್ಗವನ್ನು ಕ್ಷೇತ್ರದ ಚಿಂಚೋಳಿ ಮೂಲಕ ಸಾಗುವಂತೆ ಮಾಡಬೇಕು.

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ ೫೦% ರಿಯಾಯಿತಿಯನ್ನು ಮರುಪ್ರಾರಂಭಿಸಬೇಕು. ರೈಲ್ವೆ ಸುರಕ್ಷತೆ, ಮೂಲಸೌಕರ್ಯ ಹಾಗೂ ಪ್ರಯಾಣಿಕರ ಅನುಕೂಲತೆಗಳ ಸುಧಾರಣೆಗೆ ಕೇಂದ್ರ ಸರ್ಕಾರವು ತ್ವರಿತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಬೇಕೆಂದರು.


ಬೀದರ ಜಿಲ್ಲೆ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿರುವ ಸಂಸದ ಸಾಗರ ಈಶ್ವರ ಖಂಡ್ರೆ ಅವರಿಗೆ ಮತ್ತೊಮ್ಮೆ ಬೀದರ ಜನತೆ ಹಾಗೂ ಸಮಸ್ತ ಪತ್ರಕರ್ತರ ಪರವಾಗಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಶಶಿಕುಮಾರ ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!