09/06/2025 2:26 AM

Translate Language

Home » ಲೈವ್ ನ್ಯೂಸ್ » ಸಂಸದರಾದ ಸಾಗರ್ ಖಂಡ್ರೆ ಅವರು ಸಂಸತ್ತಿನಲ್ಲಿ ರೈಲ್ವೆ ಕುರಿತ ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.!

ಸಂಸದರಾದ ಸಾಗರ್ ಖಂಡ್ರೆ ಅವರು ಸಂಸತ್ತಿನಲ್ಲಿ ರೈಲ್ವೆ ಕುರಿತ ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.!

Facebook
X
WhatsApp
Telegram

✅ ರೈಲ್ವೆ ಅಪಘಾತಗಳ ಕುರಿತು:

ಹೊಸ ದೆಹಲಿ.18.ಮಾರ್ಚ.25:- ಕಳೆದ ದಶಕದಲ್ಲಿ ರೈಲ್ವೆ ಸಂಬಂಧಿತ ಅಪಘಾತಗಳಲ್ಲಿ 2.6 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ NCRB ಅಂಕಿಅಂಶ ಉಲ್ಲೇಖಿಸಿ, ಈ ಸಮಸ್ಯೆ ಪರಿಹಾರಕ್ಕಾಗಿ KAVACH ತಂತ್ರಜ್ಞಾನವನ್ನು ತ್ವರಿತಗತಿಯಲ್ಲಿ ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದರು. ಅವರು ಈ ತಂತ್ರಜ್ಞಾನವನ್ನು ಜಾರಿಗೆ ತರುವಲ್ಲಿ ಈಗಾಗಲೇ 68,000 ಕಿಮೀ ರೈಲ್ವೆ ಮಾರ್ಗಗಳ ಪೈಕಿ ಕೇವಲ 3,700 ಕಿಮೀ ವ್ಯಾಪ್ತಿಯಲ್ಲಿಯೇ ಈ ತಂತ್ರಜ್ಞಾನ ಜಾರಿಗೆ ಬಂದಿರುವುದನ್ನು ಉಲ್ಲೇಖಿಸಿದರು.

✅ ಅಮೃತ ಭಾರತ ನಿಲ್ದಾಣ ಯೋಜನೆ:

ಈ ಯೋಜನೆ ಅತಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, 2024-25ರಲ್ಲಿ 450ಕ್ಕೂ ಅಧಿಕ ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಪಡಿಸುವ ಯೋಜನೆಯಿದ್ದರೂ ಈವರೆಗೆ ಕೇವಲ ಒಂದು ನಿಲ್ದಾಣ ಮಾತ್ರ ಪೂರ್ಣಗೊಂಡಿರುವುದನ್ನು ಉಲ್ಲೇಖಿಸಿದರು. ಆದಷ್ಟು ಶೀಘ್ರ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

✅ ಬೀದರ ಲೋಕಸಭಾ ಕ್ಷೇತ್ರದ ಅಭಿವೃದ್ಧಿ:

ಕಮಲನಗರ ಹಾಗೂ ಭಾಲ್ಕಿ ರೈಲ್ವೆ ನಿಲ್ದಾಣಗಳನ್ನು ಮುಂದಿನ ಹಂತದ ಅಮೃತ ಭಾರತ ನಿಲ್ದಾಣ ಯೋಜನೆಗೆ ಸೇರ್ಪಡಿಸುವಂತೆ ಒತ್ತಾಯಿಸಿದರು.

ಬೀದರ-ಬೆಂಗಳೂರು ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸುವ ಮೂಲಕ ಪ್ರಯಾಣಿಕ ಸೌಲಭ್ಯವನ್ನು ಸುಧಾರಿಸುವಂತೆ ಮನವಿ ಮಾಡಿದರು.

ದಕ್ಷಿಣ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಹೈದರಾಬಾದ್‌ನಿಂದ ಬೀದರಕ್ಕೆ ವಿಸ್ತರಿಸುವಂತೆ ಪ್ರಸ್ತಾಪಿಸಿ, ದೆಹಲಿಗೆ ಉತ್ತಮ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.

ಬೀದರ-ಬೆಂಗಳೂರು ವಂದೇ ಭಾರತ ರೈಲು ಆರಂಭಿಸುವಂತೆ ಆಗ್ರಹಿಸಿ, ಇದರಿಂದ ಪ್ರವಾಸಿಗರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ತಾಂಡೂರು ಸಿಮೆಂಟ್ ಕ್ಲಸ್ಟರ್ – ಜಹೀರಾಬಾದ್ ಹೊಸ ರೈಲು ಮಾರ್ಗವನ್ನು ಬೀದರ ಲೋಕಸಭಾ ಕ್ಷೇತ್ರದ ಚಿಂಚೋಳಿ ತಾಲ್ಲೂಕು ಮೂಲಕ ಮಾರ್ಗಚಾಲನೆ ಮಾಡುವಂತೆ ಒತ್ತಾಯಿಸಿದರು.

✅ ಮಾಧ್ಯಮ ರಿಯಾಯಿತಿ:

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಮಾಧ್ಯಮ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ 50% ರಿಯಾಯಿತಿ ಕೋವಿಡ್ ಬಳಿಕ ಸ್ಥಗಿತಗೊಂಡಿದ್ದು, ಅದನ್ನು ಮರುಪ್ರಾರಂಭಿಸುವಂತೆ ಒತ್ತಾಯಿಸಿದರು.

ಸಂಸದ ಸಾಗರ್ ಖಂಡ್ರೆ ಅವರು ಈ ಎಲ್ಲ ಬೇಡಿಕೆಗಳ ಕುರಿತು ಸರ್ಕಾರವು ತ್ವರಿತ ಕ್ರಮ ಕೈಗೊಂಡು ರೈಲ್ವೆ ಸುರಕ್ಷತೆ, ಮೂಲಸೌಕರ್ಯ, ಮತ್ತು ಪ್ರಯಾಣಿಕರ ಅನುಕೂಲತೆಗಳನ್ನು ಸುಧಾರಿಸುವಂತೆ ಆಗ್ರಹಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!