ಬೀದರ.14.ಮಾರ್ಚ.25:-ಬೀದರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಅವರು ದಿನಾಂಕ:12-03-2025 ರಂದು ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದo ಪಂಚ ಗ್ಯಾರಂಟಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ಗೃಹಲಕ್ಷಿö್ಮo ಯೋಜನೆಯಡಿ ಜಿಲ್ಲೆಯಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳು 335429 ಇದ್ದು ರೂ.929.00. ಕೋಟಿ ಹಣ ಸಂಬAಧಿಸಿದ ಫಲಾನುಭವಿಗಳ ಖಾತೆಗೆ ಜಮಾಯಾಗಿರುತ್ತದೆ. ಅದಲ್ಲದೆ ಐಟಿ ಮತ್ತು ಜಿಎಸ್ಟಿ ಸಮಸ್ಯೆ ಇರುವ 2699 ಫಲಾನುಭವಿಗಳಿಗೆ ಹಣ ಬಂದಿರುದಿಲ್ಲಾವೆoದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಅದಕ್ಕೆ ಅಧ್ಯಕ್ಷರು ಸದರಿ ಫಲಾನುಭವಿಗಳ ಪಟ್ಟಿ ನೀಡಬೇಕೆಂದು ಕೇಳಿದಾಗ ಸದರಿ ಪಟ್ಟಿ ರಾಜ್ಯ ಮಟ್ಟದಲ್ಲಿರುವುದರಿಂದ ನಮಗೆ ಮಾಹಿತಿ ನೀಡಲು ಅವಕಾಶ ಇರುವದಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದರು.
ಉಪನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಅವರಿಗೆ ಪ್ರತಿ ತಿಂಗಳು ತಾಲ್ಲೂಕಿಗಳಿಗೆ ಭೇಟಿ ನೀಡಿ ನ್ಯಾಯ ಬೆಲೆ ಅಂಗಡಿಗಳನ್ನು ಪರಿಶೀಲಿಸಬೇಕೆಂದು ಸೂಚಿಸಿದರು. ಅದಲ್ಲದೇ ಕಾಳಸಂತೆಯಲ್ಲಿ ಪಡಿತರ ಆಹಾರ ಧಾನ್ಯವನ್ನು ಮಾರಟ ಆಗದಂತೆ ನೋಡಿಕೊಳ್ಳಲು ಉಪನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಅವರಿಗೆ ಸೂಚಿಸಿದರು.
ಗೃಹ ಜ್ಯೋತಿ ಪ್ರಗತಿಯನ್ನು ಪರಿಶೀಲಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಕೇಳಿದಾಗ ಎರಡು ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು, ಜೆಸ್ಕಾಂ ಬೀದರ ಮತ್ತು ಹುಮನಾಬಾದ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವದರಿಂದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಬೇಜಾರು ವ್ಯಕ್ತಪಡಿಸಿ ಅವರ ವಿರುದ್ದ ಕ್ರಮ ಕೈಕೊಳ್ಳಬೇಕೆಂದು ತಿಳಿಸಿದರು.
ಗ್ರಾಮೀಣ ಭಾಗದ ಎಲ್ಲಾ ತಾಂಡಗಳಿಗೆ ಬಸ್ಸಿನ ಸೌಲಭ್ಯ ಒದಗಿಸಬೇಕು. ಬೀದರ ಜಿಲ್ಲೆಯ ಕೆಲವೊಂದು ಬಸ್ಸು ತಂಗುದಾಣ ಕೆಟ್ಟಿಹೊಗಿರುತ್ತವೆ ಅದನ್ನು ಸರಿಪಡಿಸಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ ವಿಭಾಗ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಯುವನಿಧಿ ಬಗ್ಗೆ ಪ್ರಗತಿ ಪರಿಶೀಲಿಸಿ ಯುವನಿಧಿಯ ಪ್ರಗತಿ ತೃಪ್ತೀಕರವಾಗಿಲ್ಲವೆಂದು ಅಧ್ಯಕ್ಷರು ತಿಳಿಸಿದರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅವರು ಮಾತನಾಡಿ ಸದರಿ ವಿಷಯ ಕುರಿತು ಡಿಡಿಪಿಐ ಮತ್ತು ಡಿಡಿಪಿಯು ರವರೊಂದಿಗೆ ಸಮನ್ವಯ ಸಾಧಿಸಿ ಹೆಚ್ಚಿನ ಪ್ರಗತಿ ಸಾಧಿಸಲು ನಿರ್ದೇಶಸಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.