ಬೆಂಗಳೂರು.14.ಮಾರ್ಚ.25:- ಕಲ್ಯಾಣ ಪಥ ಯೋಜನೆ ಮೂಲಕ ಶಾಸಕರಿಗೆ ಮತ್ತಷ್ಟು ಅಭಿವೃದ್ದಿ ಅಅವಕಾಶಗಳನ್ನು ಸ್ಥಳೀಯ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಅವರು ಸಾಕಷ್ಟು ಅನುದಾನ ನೀಡಲಾಗುತ್ತಿದೆ.
ಕಲ್ಯಾಣ ಪಥ ಯೋಜನೆ ಮೂಲಕ ಶಾಸಕರಿಗೆ ಮತ್ತಷ್ಟು ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಅವರ ಹೊಣೆಗಾರಿಕೆಯಾಗಿದೆ.
ಉದ್ಯಮ ಚಟುವಟಿಕೆಗಳಿಗಾಗಿ ಭಾರಿ ವಾಹನಗಳ ನಿರಂತರ ಓಡಾಟದಿಂದ ರಸ್ತೆಗಳು ಹದಗೆಡುವುದು ಸಹಜ. ಇದಕ್ಕೆ ಇರುವ ಪರಿಹಾರವೆಂದರೆ ಜಿಲ್ಲಾ ಪಂಚಾಯಿತಿ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವುದು. ಈ ಕುರಿತು ಶಾಸಕರು ಮನವಿ ಸಲ್ಲಿಸಬೇಕಾಗುತ್ತದೆ.
ಪಂಚಾಯಿತಿ ಅನುಮತಿಯಿಲ್ಲದೆ ಅನಧಿಕೃತ ಚಟುವಟಿಕೆ ನಡೆಸುವುದು, ರಸ್ತೆ ದುರಸ್ತಿಯಂತಹ ವಿಚಾರಕ್ಕೆ ಸಂಬಂಧಿಸಿದಂತೆ ವಿಂಡ್ ಮಿಲ್ ಕಂಪೆನಿಗಳಿಗೆ ನೋಟಿಸ್ ನೀಡಿದ್ದೇವೆ. ಸಿಎಸ್ಆರ್ ನಿಧಿಯಿಂದ ರಸ್ತೆಗಳ ಅಭಿವೃದ್ಧಿಪಡಿಸುವುದಕ್ಕಾಗಿ ಕಂಪೆನಿಗಳಿಗೆ ಸೂಚಿಸಲು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸುತ್ತೇನೆ.