ಕಲಬುರಗಿ.13.ಮಾರ್ಚ.25:- ಸರ್ಕಾರಿ ಯೋಜನೆಯು ಬಡವರಿಗೆ ಸರ್ಕಾರ ಮಂಜೂರು ಮಾಡಿದೆ. ಕಾಮುಕ ಗ್ರಾಮ ಪಂಚಾಯತಿ ಸದಸ್ಯೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ಸರ್ಕಾರದಿಂದ ಸಿಗುವ ಮನೆಗೆ ಮಹಿಳೆಯೊಬ್ಬರು ಗ್ರಾಮ ಪಂಚಾಯತ್ ಸದಸ್ಯನ ಬಳಿ ಮನವಿ ಮಾಡಿದ್ದಾಳೆ.
ಮೊದಮೊದಲು ಈ ಗ್ರಾಮ ಪಂಚಾಯ್ತಿ ಸದಸ್ಯ ಮಹಿಳೆಯ ಬಳಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾನೆ.ಆ ನಂತರ ಹಣ ಇಲ್ಲದಿದ್ದರೆ ನೀನು ನನ್ನ ಜೊತೆ ಬಂದು ಮಲಗಬೇಕು.ಇಲ್ಲವಾದ್ರೆ ನಿನ್ನ ಮಗಳನ್ನು ಕಳಿಸು ಎಂದು ಮಂಚಕ್ಕೆ ಕರೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮ ಪಂಚಾಯತಿ ಸದಸ್ಯ ನೀಲಕಂಠ ರಾಠೋಡ್ ಎಂಬಾತ ಈ ರೀತಿ ಹೀನವಾಗಿ ವರ್ತಿಸಿರುವ ವ್ಯಕ್ತಿ. ನನ್ನ ಜೊತೆ ಮಲಗಿದ್ರೆ ಪಂಚಾಯತಿ ಮನೆ ಮಾಡಿಸಿಕೊಡುತ್ತೇನೆ. ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನಾದರೂ ಕಳಿಸು ಎಂದಿದ್ದಾನೆ ಎನ್ನಲಾಗಿದೆ.ಈ ಬಗ್ಗೆ ಮಹಿಳೆ ನೀಲಕಂಠ ರಾಠೋಡ್ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.