ಬೆಂಗಳೂರು.12.ಮಾರ್ಚ.25:- ನಮ್ಮ ಯುವಕ ಮತ್ತು ಯುವತಿಯರಿಗೆ ಸರ್ಕಾರಿ ನೌಕರಿ ಕೊಡಿಸುವ ನಿಟ್ಟಿನಲ್ಲಿ ವಿರೋಧ ಪಕ್ಷದವರು ಹಾಗೂ ಆಡಳಿತ ಪಕ್ಷದವರು ಒಗ್ಗಟ್ಟಾಗಿ ಎಲ್ಲರೂ ಬಹಳ ಸ್ಪಷ್ಟವಾಗಿ ಸಂದೇಶ ಕೊಟ್ಟಿದ್ದಾರೆ.
KPSC ಸುಧಾರಣೆಯ ಪ್ರಕ್ರಿಯೆಗಾಗಿ ಸಾಂವಿಧಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಬೇಕಿದೆ. ಇದನ್ನು ನಾನು ಹಿಂದೆಯೂ ಹೇಳಿದ್ದೆ ಈಗಲೂ ಹೇಳುತ್ತಿದ್ದೇನೆ.
ಪ್ರಶ್ನೆ ಇರುವುದು ಕನ್ನಡದ ಭಾಷೆಯದ್ದಲ್ಲ, ಲಕ್ಷಾಂತರ ಮಂದಿ ಯುವಕರ ಭವಿಷ್ಯದ್ದು. ಯುವಕರ ಭದ್ರ ಭವಿಷ್ಯಕ್ಕಾಗಿ ಅವರ ಇಡೀ ಕುಟುಂಬ ಕಷ್ಟ ಪಡುತ್ತಿವೆ. ಅವರಿಗೆ, ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.
ವಿಶೇಷವಾಗಿ ನಮ್ಮ ಇಲಾಖೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವುದು ಜವಾಬ್ದಾರಿ ನಮ್ಮದಾಗಿದೆ. ಅದನ್ನು ನಾನು ಮಾಡುವ ಭರವಸೆ ನೀಡುತ್ತೇನೆ.