ಬೆಂಗಳೂರು.12.ಮಾರ್ಚ.25:- ಕಾಂಗ್ರೆಸ್ ಸರ್ಕಾರವು ಗ್ರಾಮಗಳನ್ನು ಸುಸಜ್ಜಿತ ರಸ್ತೆಗಳ ಮೂಲಕ ಬೆಸೆಯುವ ಯೋಜನೆಗಳಿಗೆ ಆದ್ಯತೆ ನೀಡಿದೆ. ಇದರ ಭಾಗವಾಗಿ ಚಿತ್ತಾಪುರ ಮುಖ್ಯರಸ್ತೆಯಿಂದ ಯರಗಲ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಜನರಿಗೆ ಇದರಿಂದ ಭಾರಿ ಅನುಕೂಲವಾಗಲಿದೆ.
ಚಿತ್ತಾಪುರ ಮುಖ್ಯರಸ್ತೆಯಿಂದ ಯರಗಲ ಗ್ರಾಮದವರೆಗೆ 3 ಕಿ.ಮೀ.ವರೆಗಿನ ರಸ್ತೆ ಕಾಮಗಾರಿಗೆ ₹ 2.5 ಕೋಟಿ ಅನುದಾನ ಒದಗಿಸಿ, ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಗ್ರಾಮೀಣ ಜನರಿಗೆ, ಶಾಲಾಮಕ್ಕಳಿಗೆ, ವಾಹನ ಸವಾರರ ಸಂಚಾರ ಸುಗಮವಾಗಲಿದೆ.
ರಾಜ್ಯದ ಪ್ರತಿ ಗ್ರಾಮಗಳಿಗೂ ಮೂಲ ಸೌಕರ್ಯ ಕಲ್ಪಿಸುವುದಕ್ಕೆ ನಮ್ಮ ಸರ್ಕಾರ ಬದ್ದವಾಗಿದ್ದು, ಚಿತ್ತಾಪುರದ ಸಮಗ್ರ ಅಭಿವೃದ್ಧಿಗೆ ನಾನು ಸದಾ ಕಾರ್ಯೋನ್ಮುಖನಾಗಿರುತ್ತೇನೆ.
