ಔರಾದ್ ತಾಲೂಕಿನಲ್ಲಿ ನೀರಿನ ಸಮಸ್ಯೆ ಕುರಿತು ಮಾಧ್ಯಮದವರು ಮಾಹಿತಿ ನೀಡಿದ ತಕ್ಷಣವೇ ಸಂಸದ ಶ್ರೀ ಸಾಗರ್ ಖಂಡ್ರೆ ಅವರು ತಕ್ಷಣ ಸ್ಪಂದಿಸಿ ಸಮಸ್ಯೆ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಥಮ ಬಾರಿಗೆ ಸಂಸದರಾದರೂ, ಅವರು ನೀಡಿದ ಪರಿಪಕ್ವ ಮತ್ತು ಸಮಗ್ರ ಉತ್ತರಗಳು ಅವರ ರಾಜಕೀಯ ಪಕ್ವತೆ ಮತ್ತು ಜನಸೇವೆ ಬಗ್ಗೆ ಇರುವ ಬದ್ಧತೆಯನ್ನು ಸ್ಪಷ್ಟಪಡಿಸಿತು. ಭಾರತದ ಯುವ ಸಂಸದರಲ್ಲಿ ಒಬ್ಬರಾಗಿರುವ ಶ್ರೀ ಸಾಗರ್ ಖಂಡ್ರೆ ಅವರ ಈ ಸಕ್ರಿಯ ಮತ್ತು ಪ್ರಬುದ್ಧ ನಡೆ ಶ್ಲಾಘನೀಯವಾಗಿದೆ.