ಕಲಬುರಗಿ.09.ಮಾರ್ಚ.25:- ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೆ..
ಇದು ಮಹಿಳೆಯರ ಅಗಾಧವಾದ ಶಕ್ತಿಯನ್ನು , ಮಮತೆಯನ್ನು ವರ್ಣಿಸುವ ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಕೆಲ ಸಾಲು.

ಇಂದು ಕಲಬುರಗಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ,
ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ಜೊತೆಗೂಡಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಿದ್ದು ಸಾರ್ಥಕವೆನಿಸಿತು.
ಕಾರ್ಯಕ್ರಮದಲ್ಲಿ
⁃ 4944 ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್ ಬುಕ್ ವಿತರಿಸಲಾಯಿತು.
⁃ ಹೊಸದಾಗಿ ಆಯ್ಕೆಯಾದ 120 ಅಂಗನವಾಡಿ ಕಾರ್ಯಕರ್ತೆಯರು/ ಸಹಾಯಕಿಯರಿಗೆ ಆದೇಶಪತ್ರ ವಿತರಿಸಲಾಯಿತು.
⁃ 1257 ಅರೋಗ್ಯ ಪುಷ್ಠಿ ಫಲಾನುಭವಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು
⁃ ಲಿಂಗತ್ವ ಅಲ್ಪಸಂಖ್ಯಾತರಿಗೆ ಗೃಹಲಕ್ಷ್ಮಿ ಯೋಜನೆಯ ಚೆಕ್ ವಿತರಿಸಲಾಯಿತು
ಯಾವುದೇ ಒಂದು ಸಮಾಜದ ಅಭಿವೃದ್ಧಿಗೆ ಅಲ್ಲಿನ ಮಹಿಳೆಯರ ಸ್ವತಂತ್ರವೇ ಮಾನದಂಡ ಎಂಬ ಮಾತಿದೆ,
ಅಂತೆಯೇ
ಮಹಿಳಾ ಸಬಲೀಕರಣದಲ್ಲಿ ನಮ್ಮ ಸರ್ಕಾರ ದೃಢ ಹೆಜ್ಜೆ ಇಡುವ ಮೂಲಕ ಅಭಿವೃದ್ಧಿಗೆ ನೈಜ ಅರ್ಥ ನೀಡುತ್ತಿದೆ.
