09/06/2025 2:21 AM

Translate Language

Home » ಲೈವ್ ನ್ಯೂಸ್ » ಕೆಸ್ತೂರಿನಲ್ಲಿ ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕೆಸ್ತೂರಿನಲ್ಲಿ ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.

Facebook
X
WhatsApp
Telegram

ಯಳಂದೂರು.09.ಮಾರ್ಚ.25:- ತಾಲ್ಲೂಕಿನ ಕೆಸ್ತೂರು ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ  ಮಹಿಳಾ ದಿನಾಚರಣೆ ದಿವಸ ಧರ್ಮಸ್ಥಳ ಸೌಜನ್ಯನ ಕೊಲೆ ಮತ್ತು ಅತ್ಯಾಚಾರ ಪ್ರಕಕರಣದಲ್ಲಿ‌ ಬಾಗಿಯಾಗಿರುವವರಿಗೆ  ಶಿಕ್ಷೆಯಾಗಬೇಕೆಂದು ಹಣೆಗೆ ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಡಾ ಬಿ ಆರ್ ಅಂಬೇಡ್ಕರ್ ಯುವಕ‌ ಸಂಘದ ಅಧ್ಯಕ್ಷ ಸಚಿನ್ ಮಾತನಾಡಿ.



ಕಳದೆ ಹದಿನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ   ಸೌಜನ್ಯ ಎಂಬ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ.   

ಈ ಕೃತ್ಯವೆಸಗಿದವರಿಗೆ ಸಾಂವಿಧಾನಿಕವಾಗಿ  ತಕ್ಕ ಶಿಕ್ಷೆಯಾಗಬೇಕು ಇದರ ಹಿಂದೆ ಪ್ರಮುಖರ ಕೈವಾಡವಿರಬಹುದು ಅದಕ್ಕೆ ಈ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದ್ದಾರೆ .  ಎಷ್ಟೋ ಸಾಕ್ಷಿಗಳನ್ನು ನಾಶಮಾಡಿದ್ದಾರೆ.

ಒಬ್ಬ ಬಡ ಕುಟುಂಬದ ಯುವತಿಗೆ ನ್ಯಾಯಾ ಸಿಗಬೇಕಾದರೆ ಎಷ್ಟು ಕಷ್ಟ ಇದಿಯೇ ಎಂಬುವುದನ್ನು ಈ ಪ್ರಕರಣದಿಂದ ನಾವು ತಿಳಿದುಕೊಂಡಿದಿವೆ‌.‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನವೂ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗಬೇಕೆಂದು ಹೇಳುತ್ತದೆ ಆದರಿಂದ ಸೌಜನ್ಯನಿಗೆ ನ್ಯಾಯ ದೊರಕಿಸಬೇಕೆಂದು ನಾವು ಕಪ್ಪು ಬಟ್ಟೆಯನ್ನು ಕಟ್ಟಿ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಹೇಶ್ ಜಿ, ಸಹ ಕಾರ್ಯದರ್ಶಿ ಮಹೇಂದ್ರ, ಖಜಾಂಚಿ ಶಿವಶಂಕರ್, ಪದಾಧಿಕಾರಿಗಳಾದ ಕಿರಣ್ ಜೆ, ರಾಘವ,  ಸಂಘದ ಪದಾಧಿಕಾರಿಗಳಾದ ಚಂದನ್, ಪುರುಷೋತ್ತಮ, ಮನೋಜ್, ಮಹೇಂದ್ರ,  ಹಾಗೂ ಇತರರು ಹಾಜರಿದ್ದರು.

_G Prasannakumar Kittur

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!